ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 28, 2017

ಲಕ್ಷ್ಮೀಶನ ಜೈಮಿನಿ ಭಾರತ

ಲಕ್ಷ್ಮೀಶನ
ಜೈಮಿನಿ ಭಾರತ

ಮೊದಲನೆಯ ಸಂಧಿ
ವಾರ್ಧಕ ಷಟ್ಪದಿ

ಶ್ರೀವಧುವಿನಂಬಕ ಚಕೋರಕಂ ಪೊರೆಯೆ
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ
ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ
ಆವಗಂ ಸರಹ ಕರುಣಾಮೃತದ ಕಲೆಗಳಿಂ
ತೀವಿದೆಳನಗೆಯ ಬೆಳುದಿಂಗಳಂ ಪಸರಿಸುವ
ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ ॥೧॥

ಪ್ರಸ್ತುತ ದೊಳೊಗೆದ ಮುಂಬೆಳಗಮಲದಂತದ ಗ
ಭಸ್ತಿ ನವ ಪೂರ್ವ ಸಂಧ್ಯಾರುಣಂ ಭಾಳವಿ
ನ್ಯಸ್ತ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮೂಡುವೆಳನೇಸರೆಹಸೆವ
ಮಸ್ತಕದ ಮಣಿಮಕುಟಮಾಗಲುದಯಾಚಲದ
ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ
ಮಸ್ತ ಸಿದ್ಧಿಪ್ರದಾಯಕ ವಿನಾಯಕ ಮಾಳ್ಪುದೆಮಗೆ ನಿರ್ವಿಘ್ನತೆಯನು ॥೩॥

ಭೂವ್ಯೋಮ ಪಾತಾಳ ಲೌಕಂಗಳಲ್ಲಿ ಸಂ
ಭಾವ್ಯರೆಂದೆನಿಸಿಕೊಳ್ವಖಿಳದೇವರ್ಕಳಿಂ
ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಿಣಿ ಫಣಿವೇಣಿ ವಾಣಿ
ಕಾವ್ಯಮಿದು ಭುವನದೊಳ್ ಸಕಲ ಜನರಿಂದೆ ಸು
ಶ್ರಾವ್ಯಮಪ್ಪಂತೆನ್ನ ವದನಾಬ್ಜದಲ್ಲಿ ನೀ
ನೇ ವ್ಯಾಪಿಸಿರ್ದಮಲಮತಿಯಂ ತಾಯೆನಗೆ ತಾಯೆ ನಗೆಗೂಡಿ ನೋಡಿ ॥೪॥

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ
ಯ್ಗಿನಿದಾಗಿ ಸವಿಯದೆದರೊಳಗೆ ಪುಳಿವಿಳಿದು ಲಸ
ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ
ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ
ಥನಕವಿತೆಯೆಂದು ಕುಂದೀಟ್ಟು ಜರೆದೊಡೆ  ಪೇಳ್ದ
ವನೊಳಾವುದೂಣೆಯಃ ಜಾಣರಿದನರಿದು ಮತ್ಸರವ ಮರೆದಾಲಿಸುವುದು ॥೭॥

ಜಾಣರಂ ತಲೆದೂಗಿಸದೆ ನುಡಿದೊಡಾಪದ
ಕ್ಕೂಣೆಯಂ ಬಹುದೆಂದು ಸಲಸೋಕ್ತಿಯಿಂದೆ ಗೀ
ರ್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಿ ನಿಪುಣನು
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ
ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು
ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ವುದು ಸುಜನರು ॥೮॥

ವರ ವರ್ಣದಿಂದೆ ಶೋಭಿತಮಾಗಿ ರೂಪ ವಿ
ಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋ
ದರ ಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ ಪ್ರಚುರಮಾಗಿ
ನಿರುತ ಮಂಜುಳ ಶಬ್ಧದಿಂದೇ ಕಿವಿಗಿಂಪಾಗಿ
ಚರಿಸುವ ಸುಲಲಿತ ಷಟ್ಪದಿಗ಼ಳೆಡೆಬಿಡದೆ ಝೇಂ
ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು॥೧೨॥

ಐದನೆಯ ಸಂಧಿ

ವೇದವ್ಯಾಸರಿಂದ ಧರ್ಮಸಾರ

ಸಾರ್ವನಿಗಮಾರ್ಥಮಂ ತಿಳಿದು ಸತ್ಕರ್ಮಮಂ
ಸಾರ್ವಕಾಲಂಗೆಯ್ದು ಪರವಧೂವಿಷಯಮಂ
ಸಾರ್ವ ಚಿಂತೆಯನುಳಿದು ಲೋಕಾಪವಾದಮಂ ಪರಿಹರಿಸಿ ಪರರೊಡವೆಗೆ
ಪಾರ್ವನಲ್ಲದೆ ಸದಾಚಾರದಿಂ ನಡೆದೊಡಾ
ಪಾರ್ವನಿಹದೊಳ್ ಕೀರ್ತಿಪರನಾಗಿ ಬಳಿಕವಂ
ಪಾರ್ವನುತ್ತಮಗತಿಗೆ ದೇಹಾವಸಾನದೊಳ್ ಭೂಪಾಲ ಕೇಳೆಂದ ॥೪೯॥

ಸರ್ವಧರ್ಮಗಳನರಿದೋವಿದೊಡೆ ರಣಕೆ ಬೇ
ಸರ್ವನಲ್ಲದೊಡಾತ್ಮವಿದನಾದೊಡಿಳೆಯೊಳ್ ಪೆ
ಸರ್ವಡೆದು ಕ್ಷತ್ರಿಯಂ ಕಾದಿ ಮಡಿದೊಡೆ ಸೂರೆಗೊಂಬನಮರಾವತಿಯನು
ದುರ್ವಚನಮಂ ನುಡಿಯದತಿಥಿಗಳ ಕೆಡೆನುಡಿಯ
ದುರ್ವರ್ಧನಮಂ ಕೂಡಿ ಗೋರಕ್ಷಣಂಮಾಳ್ಪು
ದುರ್ವರೆಯೊಳಿದು ಕೀರ್ತಿ ವೈಶ್ಯಂಗೆ ಪರಗತಿ ಮುಕುಂದಸೇವೆಯೊಳಪ್ಪುದು॥೫೦॥

ದ್ವಿಜರಾಸರಂದಳೆದು ಬೆಸಗೈವ ಶೂದ್ರನುಂ
ದ್ವಿಜರಾಜವಾಹನಸ್ಮರಣೆಯಿಂದೈದುವಂ
ದ್ವಿಜರಾಜಸನ್ನಿಭದ ಸುಗತಿಯಂ ಜಗದೊಳಂತದು ಕುಲಸ್ತ್ರೀಯರೊಳಗೆ
ನಿಜನಾಥಭೀತೆ ಸುಚರಿತ್ರೆ ಗುಣವತಿ ಮಾನಿ
ನಿ ಜನಾಪವಾದವಿರಹಿತೆಯೆನಿಪ ನಾರಿ ನ
ನ್ನಿ ಜನಾರ್ದನಾದಿ ನಿರ್ಜರವರ್ಯವಿನುತೆಯಹಳೆನಲವಳ ಸುಕೃತಮೆಂತೋ ॥೫೧॥

ಪತಿ ದೈವಮೆಂದರಿದು ನಡೆವ ಸತಿಗಹುದು ಪರ
ಗತಿಯಲ್ಲದಂಗನೆಯರತಿಸಾಹಸಿಗಳವರ
ಕೃತಕಶೀಲಂಗಳಂ ನಂಬಲಾಗದು ಮೇಣ್ ಸ್ವತಂತ್ರಮಂ ಕುಡಲಾಗದು
ಪಿತನಿಂದೆ ಬಿಲ್ಯದೊಳ್ ಪತಿಯಿಂದೆ ಹರೆಯದೊಳ್
ಸುತನಿಂದೆ ವೃದ್ಧಿಪ್ಯದೊಳ್ ಕುಲಸ್ತ್ರೀ ಸುರ
ಕ್ಷಿತೆಯಿಗದಿರ್ದೊಡವಳಿಂದೆ ನಿಜವಂಶಕುಹಪತಿ ಬಾರದಿರದಿಳೆಯೊಳು ॥೫೨॥

ವರಯಜ್ಞಶಾಲೆಯುಂ ಬಾಲೆಯುಂ ದ್ವಿಜಪಙ್ತಿ
ಪರಿಶೋಭಿಸದೊಡಂ ಸತ್ಯವಿತೆಯುಂ ಯುವತಿಯುಂ
ಚರಣಗತಿ ಸಮತೆವೆತ್ತಿರದೊಡಬ್ಜಾರಿಯುಂ ನಾರಿಯುಂ ಚಾರುತರದ
ಕರಭೋರುಕಾಂತಿ ಸಂಯುಕ್ತಮಾಗಿರದಿರ್ದೊ
ಡರಸಾಳ್ವ ಧರಣಿಯುಂ ತರಣಿಯುಂ ಶಾಲಿಸುಂ
ದರಮಾಗಿರದೊಡೆ ಸೌಮಂಗಳ್ಯಮಾಗಿಯುಂ ಮೇಲೆಯುನ್ನತಿಯಪ್ಪುದೆ ॥೫೩॥

ಮಾವಂಗೆ ಭಾವಂಗೆ ಮೇಣತ್ತೆಗೈದೆ ಸಂ
ಭಾವಿಸುತೆ ಸೇವಿಸುತೆ ಕಾಂತಂಗೆ ಸುರಥಸಂ
ಜೀವನವನೀವ ನವಯುವತಿಯಹ ಲಕ್ಷಣಂ ಸುಕೃತಫಲಮಂತಲ್ಲದೆ
ಪಾವಿನಂತಾವಿನಂತಡಿಗಡಿಗೆ ಮೊರೆದೆದ್ದು
ಡಾವರಿಸಿ ಸೀವರಿಸಿ ಮನೆಗೆಲಸಮಂ ಗೆಯ್ಯ
ದಾವನಿತೆ ಸಾವನಿತೆ ಲೇಸೆನಿಸದಿಹಳೆ ತತ್ಪತಿಗೆತದ್ಗುರುಜನಕ್ಕೆ ॥೫೪॥

ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ
ಮೇಲೆ ಕಾಲಂಗುಳಿಗಳೋರಗೆಯೊಳೊಂದದಿರೆ
ಬಾಲೆಗೀ ಲಕ್ಷಣಂ ಮುತ್ತೈದೆತನಮಾಗಲರಿಯದು ವಿಧವೆಯಾದೊಡೆ
ಶೀಲಮಾಲಂಬಿಸಿ ತವರ್ಮನೆಯೊಳಿರ್ದನಿತು
ಕಾಲಮಾಲಸ್ಯಮಿಲ್ಲದೆ ಸದಾಚಾರಕನು
ಕೂಲೆಯಾಗಿರುತಿರ್ದು ದೇಹ‌ಮಂ ದಂಡಿಸಲ್ ಪತಿಲೋಕಮಂ ಪಡೆವಳು ॥೫೫॥

ವಿಟಗೋಷ್ಠಿಯೊಳ್ ಭೋಗಮಂ ಬಯಸಿ ಕಾಮಲಂ
ಪಟೆಯಾಗಿ ಮೇಣರ್ಥಮಂ ಗಳಿಸಿ ಗರ್ವದಿಂ
ಜಟರಮಂ ಪೊರೆಯುತ್ತೆ ಗರಿಯೊಗೆದುರುಗಿವೊಲಿಹ ದುಷ್ಟವಿಧವೆಯರ ರತಿಯು
ಘಟಿಪುದಾವಂಗವನುಮವಳುಮವಳಾಣ್ಮನುಂ
ಸಟೆಯಲ್ಲ ಮೂವರುಂ ಪತಿತರದರಿಂದೆ ಸಂ
ಕಟದೊಳಂ ನೋಡಲಾಗದು ಪರಸ್ತ್ರೀಯರಂ ನೆರೆದೊಡುಕ್ಕುಲಮಪ್ಪುದೆ॥೫೬॥

ಗೃಹಕೃತ್ತಮಂ ಬಿಟ್ಟು ನೆರೆಮನೆ ತವರ್ಮನೆಯೊ
ಳಿಹಳೆಳೆಯರಂ ಚುಂಬಿಸುವಳೊಲಿದು ಪಾಡುವಳ್
ಗಹಗಹಿಸಿ ಬರಿದೆ ನಗುವಳ್ ಬೀದಿಗರನೈದೆ ಬಾಗಿಲೊಳ್ ನೋಡುತಿಹಳು
ಬಹುಜನದ ಮುಂದೆ ಸುಳಿವಳ್ ನಾಡಮಾತಂ ಗ
ಳಹುವವಳ್ ತರುವಲಿಗಳೊಡನಾಡುವಳ್ ತನ್ನ
ಸಹಜಮಲ್ಲದೆ ಪಿರಿದಲಂಕರಿಸಿ ಕೊಂಬುವಳ್ ನಿಲ್ವಳೆ ಶಿಕ್ಷಿಸಿದೊಡೆ ॥೫೭॥

ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರ
ವರ್ತಕಿಯ ದಾಸಿಯ ಬುರುಂಡೆಯ ಕಪಾಲಿನಿಯ
ಭರ್ತಾರನುಳಿದವಳ ಮಾಲೆಗಾತಿಯ ಜಟಿಯ ಸೂತಕಿಯ ಸೈರಂಧ್ರಿಯ
ಕರ್ತವ್ಯದಿಂದಿನಿಬರೊಡನಾಡಿದೊಡೆ ಬಾಲೆ
ಯರ್ತವೆ ದುರಾಚಾರಮಂ ಕಲಿವರದರಿಂ ಬು
ಧರ್ತರುಣಿಯರ ನಡೆವಳಿಗೆ ಭಂಗಮಂಕುರಿಸದಂತೆ ಪಾಲಿಸವೇಳ್ವುದು ॥೫೮॥

ಪುರುಷಾಂತರಕ್ಕೆಳಸಿ ಪುಷ್ಪಶರತಾಪದಿಂ
ಕರಗಿ ಕಾತರಿಸಿ ಮೆಲ್ಲನೆ ದೂತಿಯೊರ್ವಳಂ
ಕರೆದೊಡಂಬಡಿಸಿ ಬೇಡಿದನಿತ್ತು ಸತ್ಕರಿಸಿ ಪೊತ್ತುವೇಳೆಗಳನರಸಿ
ನೆರೆಹೊರೆಯರಿರದಂತೆ ಪತಿಯಂ ಮರೆಸಿ ಮನೆಯ
ವರನೆಲ್ಲರಂ ಟೊಣೆದು ಮದನಕೇಳಿಗೆ ಸಂದು
ಮರಳಿ ಮಾನಿನಿಯರಂತಿರಬಲ್ಲರವರೆ ಜಾರೆಯರವರನೌವಬಹುದೆ॥೫೯॥

ಸೋಲ್ದನಂ ಕಂಡು ಕಣ್ಗೊನೆಗೊಲಿದು ನೋಟಮಂ
ಜೋಲ್ದುರುಬನೊಂದಿಸುವ ನೆವದಿಂದೆ ಕೈನೆಗಪಿ
ಸಾಲ್ದ ಮೇಲುದನೋಸರಿಸಿ ಮೊಲೆಗೆಲದ ಪೊಗರ್ದೋರಿ ಪಸಿಲಜ್ಜೆಯಿಂದೆ
ತೇಲ್ದವಳ ತೆರದಿಂದೆ ನಸುನಗೆಯ ಪಸರಿಸುತೆ
ಕಾಲ್ದೇಗೆಯದೊಯ್ಯನೊಯ್ಯನೆ ನಡೆವ ಭಂಗಿಯಂ
ನಾಲ್ದೆಸೆಗೆ ಕಾಣಿಸುವ ಮೈಸಿರಿಯ ಕಿಮಿನಿರರವರೆ ಜಾರೆಯೇನಿಪರು ॥೬೦॥

ಚಪಲೆ ಚಂಚಲೆ ಚಾಟುಮತಿ ಚಂಡಿ ಚಲವಾದಿ
ಕುಪಿತೆ ಕುತ್ಸಿತೆ ಕುಹಕೆ ಕುಜೆ ಕುಟಿಲೆ ಕುವಗೇಡಿ
ಕಪಟಿ  ಕಂಟಕಿ ಕಟಕಿ ಕಡುದುಷ್ಟೆ ಕಲಹಾರ್ಥಿ ವಿರಸೆ ಪರವಶೆ ಪಾದರಿ
ವಿಫಲೆ ವಿಹ್ವಲೆ ವಿಷಮೆ ವಿರಹಿ ವಿಪರೀತೆ ಮಿಗೆ
ತಪಿತೆ ತಸ್ಕರೆ ತವಕೀ ತವೆ ತಂದ್ರಿ ತಾಮಸಿಯೆ
ನಿಪ ವನಿತೆಯರ ನಿಜಕೆ ನಿಲಿಸಿ ನಿಶ್ಚೈಸಿದೊಡೆ ಬಳಿಕ ಬಳಲಿಕೆ ಬಾರದೆ ॥೬೧॥

ಹಲವು ಮಾತೇನರಸ ಚಿತ್ರದೊಳ್ ಬರೆದ ಕೋ
ಮಲೆಯರಂ ನಂಬಬಾರದು ನಿರುತಮೆನಲವರ
ಪೊಲಬುಗಂಡವರುಂಟೆ ಸಾಕದಂತಿರಲಿ ಪರಿಕಲ್ಪಿತವ್ರತ ಸಮಾಧಿ
ಸಲೆ ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ
ವಿಲಗವಿಲ್ಲಾತ್ಮಪತಿಸೇವೆಯಂ ಪ್ರತಿದಿನದೊ
ಳಲಸದೆ ನೆಗಳ್ಚಿದೊಡೆ ಸತಿಯರ್ಗೆ ಕೀರ್ತಿಸುಗತಿಗಳಪ್ಪುವಿಹಪರದೊಳು॥೬೨॥

ಭೂಪಾಲ ಕೇಳ್ ಧರ್ಮಸಾರಮಿದು ಜಗದೊಳ್ ಮ
ಹೀಪತಿಗಳರ್ಥಲೋಲುಪ್ತಿಯಿಂ ತಮ್ಮಯ ಸ
ಮೀಪದೊಳ್ ದ್ಯೂತರತರಂ ನಾಸ್ತಿಕರನೈದೆ ಪಿಸುಣರನಸೂಯಕರನು
ಸೋಪಚಾರದೊಳಿರಿಸಿಕೊಂಡಿರುತಿರಲ್ ಪ್ರಜಾ
ಲೋಪಮಪ್ಪುದು ರಾಜ್ಯಮದರಿನಪಕೀರ್ತಿಯಿಂ
ಪಾಪದಿಂದರಸುಗಳ್ಗಿಹಪರಂ ಕಿಡುಗುಮಿದನರಿಯದಿರಬಹುದೆ ನೃಪರು ॥೬೩॥

ಆಚಾರರಧರ್ಮದಿಂ ನಡೆಯಲರಿಯದ ವಿಪ್ರ
ನೇ ಚಕ್ರಿಯಾಜ್ಞೆಯಂ ಮೀರದವನವನಿಂದೆ
ನೀಚನೆ ಹರಿಪ್ರಿಯಂ ಮಾಧವನ ಪೂಜೆಗೆಯ್ಯದವಂಗೆ ಸುಗತಿಯುಂಟೆ
ಈ ಚತುರ್ದಶ ಜಗದೊಳಂತಿರಲದಿನ್ನು ಸಲೆ
ಸೂಚಿಪೆಂ ನಿನಗೆ ಬೆಸಗೊಂಬುದೆನೆ ರಮೆ ನೆಲಸಿ
ಗೌಚರಿಪಳಾವನ ಮನೆಯೊಳೆಂದು ಭೂವರಂ ಕೇಳ್ದೊಡಾಮುನಿ ನುಡಿದನು ॥೬೪॥

ವತ್ಸ ಕೇಳಾದೊಡೀ ಧರೆಯೊಳಖಿಳಪ್ರಾಣಿ
ವತ್ಸಲನ ಸತ್ಯಶೌಚಾನ್ವಿತನ ಮನೆಗೆ ಶ್ರೀ
ವತ್ಸಲಾಂಛನನರಸಿ ತೊಡವೆನಿಪಳಾವಗಂ ಪತಿ ಪರಾಯಣೆಯಾಗಿಹ
ಸತ್ಸತಿಯದೆಲ್ಲಿ ಮೇಣುನ್ಮುಖಾನಂಗವಿಕ
ಸತ್ಹರೋಜಾಸ್ತ್ರಕಳುಕದ ಪುರುಷನೆಲ್ಲಿ ವಿಲ
ಸತ್ಸಮುದ್ರಾತ್ಮಜೆ ಸರಾಗದಿಂದಲ್ಲಿ ಸುಸ್ಥಿರೆಯಾಗಿ ನೆಲಸಿರ್ಪಳು ॥೬೫॥

ರನ್ನದಿಂ ಧಾನ್ಯಮೆ ವಿಶೇಷಮೆಂದೊದವಿಸುವ
ನನ್ನಮೇ ಕರಿಸದಿಂ ಕಡೆಯೆಂದು ವೆಚ್ಚಿಸುವ
ನುನ್ನಿಸಲ್ ಬಾಲಕನುಮತಿಥಿಯುಂ ಸರಿಯೆಂದು ಸತ್ಕರಿಪನಾವನವನ
ತನ್ನ ತಾಯ್ತಂದೆ ಸೋದರ ಬಂಧು ಬಳಗಮಂ
ಮನ್ನಿಸುವನಾವನಾತನ ಸದಾಚಾರಸಂ
ಪನ್ನನಾವನವನ ಮಂದಿರದೊಳೈಶ್ವರ್ಯ ಲಕ್ಷ್ಮಿನೆಲೆಯಾಗಿರ್ಪಳು ॥೬೬॥

ಹೊಸ್ತಿಲೊರಳೊನಕೆಗಳ ಮೇಲೆ ಕುಳ್ಳಿರ್ಪವನ
ಮಸ್ತಕವನೆರಡುಕಯ್ಯಿಂ ತುರಸಿಕೊಂಬವನ
ವಿಸ್ತರದ ಜೂಜುಗಳ್ಗೆಳಸುವನ ಪಿರಿದುಂಬುವನ ನಿಂದು ನೀರ್ಗುಡಿವನ
ಅಸ್ತಮಯದುದಯಕಾಲದೆ ನಿದ್ರೆಗೈವನಾ.
ತ್ಮಸ್ತುತಿಯ ಪರನಿಂದೆಯವನ ಸಾಧಿಸಿ ಪರರ
ವಸ್ತುವಂ ಕಳುವನ ನಿರುದ್ಯೋಗದವನ ಸಿರಿ ತೊಲಗಿದಲ್ಲದೆ ಮಾಣ್ಬಳೆ॥೬೮॥

ಜಡನ ಮೂರ್ಗನ ಶಠನ ತಾಮಸನ ನಿಷ್ಠುರದ
ನುಡಿಯವನ  ಪಿಸುಣನ ಕೃತಘ್ನನ ಕರುಬನ ಬಾ
ಯ್ಬಡಿಕನ ಕುಚೇಷ್ಟಕನ ಕಾಮುಕನ ಹಿಂಸಕನ ಡಾಂಬಿಕನ ಪಾಷಂಡಿಯ
ಕಡುಕೋಪದವನ ಬಹುಭಕ್ಷಕನ ಖೂಳನನ
ದೃಢನ ಕುತ್ಸಿತನ ಕುಹಕನ ದುರಾಚಾರದಿಂ
ನಡೆವವನ ವಿಶ್ವಾಸಘಾತಕನ ಪಾತಕನ ಲಕ್ಷ್ಮಿ ತೊಲಗದೆ ಮಾಣ್ಬಳೆ ॥೬೯॥

ಹತ್ತನೆಯ ಸಂಧಿ
ಉದ್ದಾಲಕನ ಕಥೆ.

ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್
ಭರಿತನಾಗಿಹನಾವಗಂ ಧರ್ಮಸೂನು ಮರೆ
ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕ್ರತುವನು
ತರಳತೆಯ ಮೆರೆವೆಗಿಂತರಿವನುಪದೇಶಿಪೊಡೆ
ಗುರುಗಳಲ್ಲವೆ ನೀವು ಧನ್ಯರಾದಪೆವಿನ್ನು
ಕರುಣದಿಂದೀ ಶಿಲೆಯೋಳೊಂದಿದ ತುರಂಗಮಂ ಬಿಡಿಸಿಕೊಡಬೇಕೆಂದನು ॥೨೧॥

ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ
ನಿನ್ನ ಹಸ್ತಸ್ಪರ್ಶನಂ ಗೆಯ್ದೊಡಿ ಕುದುರೆ
ಮುನ್ನಿನಂತವನಿಯೊಳಾ ನಡೆದಪುದು ಪೋಗು ನೀನೆಂದು ಸೌಭರಿ ನುಡಿಯಲು
ತನ್ನೊಳಗೆ ತಾನೇ ವಿಸ್ಮಿತನಾಗಿ ಪಾರ್ದನದ
ರುನ್ನತಿಯ ತುದಿ ಮೊದಲನರುಪೆನಲ್ ಜ್ಞಾನ ಸಂ
ಪನ್ನ ತಾಪಸನರ್ಜುನಂಗೆ ವಿಸ್ತರಿಸಿದಂ ಮತ್ತ ಪೂರ್ವಾಪರವನು ॥೨೨॥
ಆಲಿಸರ್ಜುನ  ಮುನ್ನ ವಿಪ್ರನುಂಟೋರ್ವನು
ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ
ಮೇಲೆ ವೈವಾಹದೊಳ್ ವಧುವಾದಳಿತಂಗೆ ಚಂಡಿಯೆಂಬಾಕೆ ಬಳಿಕ
ಕಾಲಕಾಲದ  ಜಪಾನುಷ್ಠಾನಪೂಜೆಗಳಿ
ಗಾಲಸ್ಯಮಂ ಮಾಡದೆನ್ನ ಪರಿಚರ್ಯೆಗನು
ಕೂಲೆಯಾಗಿರ್ದು ಮನೆವಾಳ್ತೆಯಂ ಸಾಗಿಪುದು ನೀನೆಂದೊಡಿಂತೆಂದಳು॥೨೩॥

ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ
ಗೊಳ್ಳದಿರ್ ಪರಿಚರ್ಯೆ ಮನೆವಾಳ್ತೆಯೆಂದೆಂಬ
ತಳ್ಳಿಯವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಪೋರೆ
ಮುಳ್ಳಿಡಿದ ಮರವೇರಿದಂತಾದುದಿಹಪರಕಿ
ದೊಳ್ಳಿತಾದಪುದೆ ಬಂದುದು ತಪೋಹಾನಿಯೆಂ
ದಳ್ಳೆಯೊಳ್ ಕೋಲ್ಗೊಂಡ ತೆರದೊಳುದ್ದಿಲಕಂ ಚಿಂತಿಪಂ ಪ್ರತಿದಿನದೊಳು ॥೨೪॥

ಇಂತಿರುತಿರಲ್ಕೆ ಕೌಂಡಿನ್ಯನೆಂಬೊರ್ವ ಮುನಿ
ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ
ಚಿಂತೆವೆತ್ತಿರಲವನಿದೇನೆಂದು ಬೆಸಗೊಂಡೊಡವಳ ಪ್ರತಿಕೂಲತೆಯನು
ಅಂತರಿಸದೆಲ್ಲಮಂ ಪೇಳ್ದೊಡವನಿದಕೆ ನೀಂ
ಮುಂತೆ ವಿಪರೀತಮಂ ಮಾಡಲಾದಪುದೆಂದು
ಸಂತಾಪಮಂ ಬಿಡಿಸಿ ಬೀಳ್ಕೊಂಡವಂ ತೀರ್ಥಯಾತ್ರೆಗೈದಿದನಿತ್ತಲು ॥೨೫॥

ಉದ್ದಾಲಕಂ ಬಳಿಕ ತನ್ನ ಮಂದಿರದೊಳಿರು
ತಿದ್ದಸಮಯಕೆ ಪಿತೃಶ್ರಾದ್ಧದಿವಸಂ ಬಂದೊ
ಡೆದ್ದು ಚಂಡಿಯೊಳೆಲಗೆ ನಾಳೆ ಪೈತೃಕಮದಂ ನಾಡಿದಲ್ಲದೆ ಮಾಡೆನು
ಕದ್ದು ತಹೆನಧಮಧಾನ್ಯ ವ್ರೀಹಿ ಶಾಕಮಂ
ಪೊದ್ದಲೀಯೆಂ ಶುದ್ಧವಸ್ತುಗಳನೊಂದುಮಂ
ತದ್ದಿನಕೆ ಮರುದಿವಸದೊಳ್ ಪೇಳ್ದು ಬಹೆನಪಾತ್ರಂಗೆಂದೊಡಿಂತೆಂದಳು ॥೨೬॥

ನಾಳೆ ಮಾಡಿಸುವೆನಾಂ ಪೈತೃಕವನುತ್ತಮದ
ಶಾಲಿಧಾನ್ಯ ವ್ರೀಹಿಶಾಕಮಂ ಕೋಂಡು ಬಹೆ
ನಾಲಯವನತಿಶುದ್ಧವಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ
ಪೇಳಿಸುವೆನಂದಿನ ದಿನದ ಮೊದಲ ರಾತ್ರಿಯೆ ವಿ
ಶಾಲಗುಣಸಂಪನ್ನ ವೇದಪಾರಂಗತ ಸು
ಶೀಲರಹ ಸತ್ಪಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು॥೨೭॥

ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ
ಳಾದರಿಸೆನಾಂ ಬಂದ ವಿಪ್ರರಂ ಪಾಕದ ನ
ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದು ಭಕ್ಷ್ಯ ಭೋಜ್ಯಾದಿಗಳನು
ಸ್ವಾದುಫಲ ಶರ್ಕರ ವಿನುತ ಶಾಕ ನಿರ್ಮಲ ಪ
ಯೋದಧಿಗಳಂ ಸಕುತ್ಸಿತಮಾಗದಂತೆ ಸಂ
ಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು ॥೨೮॥

ಎಂದೊಡೆ ಕುತುಪಕಾಲಮಂ ಮೀರಲೀಯೆನಾಂ
ಬಂದ ವಿಪ್ರರನಾದರಿಸಿ ಪೂಜೆಗೈಸದಿರೆ
ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಹಸದೆ ಮಾಣೆನು
ತಂದುಲವಸ್ತ್ರ ತಾಂಬೂಲ ವರದಕ್ಷಿಣೆಗ
ಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನೆನುತೆ ನಲ
ವಿಂದೊದವಿಸಿದಖಿಳಲಸದ್ರ್ರವ್ಯಮಂ ಬಳಿಕ ಚಂಡಿ ಪಾಕಂಗೈದಳು ॥೨೯॥

ಕಂಡನೀತೆರನನುದ್ದಾಲಕಂ ಸಂತಸಂ
ಗೊಂಡು ಮನದೊಳ್ ಪೊರಗೆ ತಾನೊಪ್ಪದವನಾಗಿ
ಚಂಡಿ ಪೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ
ತೊಂಡುತೊಳಸಂ ಮರೆದು ಕರ್ಮಾಂಗಮಾಗಿರ್ದ
ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡು
ದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ರೋಷಭೀಷಣನಾದನು ॥೩೦॥

ಎಲೆಗೆ ನಿನ್ನೊಡನೆ ನಾನೇಂ ಹರಿಯಹೋರುವೆಂ
ಛಲಿತನಕಲಿಸಿದೆ ನೀನರೆಯಾಗಿ ಹೋಗೆಂದು
ಸಲೆ ಮುಳಿದು ಶಾಪವಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದು
ಕೆಲವುಕಾಲಕೆ ನಿನ್ನೊಳಧ್ವರಹಯಂ ಬಂದು
ನಿಲಲರ್ಜುನಂ ಬಿಡಿಸಿದೊಡೆ ಮೋಕ್ಷಮಹುದೆಂದು
ತೊಲಗಿದಂ ಸಂನ್ಯಾಸಕವನತ್ಥಲವನಿಯೊಳ್ ಕಲ್ಲಾದಳಿವಳಿತ್ಥಲು ॥೩೧॥

ಮೋಕ್ಷಮಹುದಾಗಿ ಚಂಡಿಗೆ ಶಾಪಮೀಗಳುಪ
ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ
ಲೀಕ್ಷಣದೊಳೆದ್ದು ಪೋದಪುದು ಪೋಗಿನ್ನು ಮುಂದಣ ನೃಪರ್ ಬಲವಂತರು
ರಾಕ್ಷಸಾರಿಯನೆ ಮರೆಯದಿರೆಂದು ಸೌಭರಿ ನಿ
ರೀಕ್ಷಿಸಿ ಕೃಪಾವಲೋಕನದಿಂದೆ ವರಸಹ
ಸಹಸ್ರಾಕ್ಷನ ಕುಮಾರನಂ ಕಳುಹಲಾನತನಾಗಿ ವಿನಯದಿಂ ಬೀಳ್ಕೊಂಡನು ॥೩೨॥

ತದನಂತರದೊಳರ್ಜುನಂ ಬಂದು ಕುದುರೆಯಂ
ಮುದದಿಂದೆ ಮುಟ್ಟಲದು ಬಿಟ್ಟು ನಡೆದುದು ಮುಂದ
ಕೊದರಿಕೊಳುತೆದ್ದು ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು
ಒದವಿದ ಸಮಸ್ತ ಜನಮಾಗೆ ವಿಸ್ಮಿತಮಾದು
ದುದಿರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕೆ ನಡೆ
ದುದು ವಾಜಿ ಚಂಪಕಾಪುರಕಂದು ಹಿಂದೆ ಬಹ ಪಡೆಸಹಿತ ವಹಿಲದಿಂದ ॥೩೩॥

ಹನ್ನೊಂದನೆಯ ಸಂಧಿ

ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ
ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ
ಮೋಹದ ಕುಮಾರಂ ಸುಧನ್ವನಾಯತನಾಗಿ ಬಂದು ನಿಜಮಾತೆಯಡಿಗೆ
ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗೆ ಸಿತ
ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್
ಸಾಹಸಂಮಾಳ್ಪೆನೆನ್ನಂ ಪರಿಸಿ ಕಳುಹೆಂದು ಕೈಮುಗಿದೊಡಿಂತೆಂದಳು ॥೧॥

ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯ
ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ
ನಂದದಿಂ ಪಾರ್ಥನಂ ರಕ್ಷಿಸುವ ಹರಿಯನೇ ಹಿಡಿವ ಬುದ್ಧಿಯನೆ ಮಾಡು
ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದೆಂ ಮು
ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ
ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು ॥೨॥

ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ
ರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೊಂದು
ಪಾಯಮಂ ಬಲ್ಲೆನಾಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು
ನೋಯಿಸಿದೊಡಗಧರಂ ಬಾರದಿರನಾನತರ
ಪಿಯಮಂ ಸೈರಿಸಂ ಬಳಿಕ ತೋರುವೆನಂಬು
ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮಗುಳಿಂತೆಂದಳು ॥೩॥

ಕರುವನೆಳಗಂದಿ ತಾನರಸಿಕೊಂಡೈತರ್ಪ
ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ
ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು
ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್
ನೆರೆ ಕೃಷ್ಣನಂ ಗೆಲ್ಲರುಂಟೆ ಸಿಕೆನ್ನೊಡಲ
ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ಮೆಟ್ಟದಿರ್ ಪೋಗೆಂದಳು ॥೪॥

ಎಂದೊಡೆಲೆ ತಾಯೆ ಕೇಳ್ ಚಕ್ರಿಗೆ ವಿಮುಖನಾಗಿ
ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ
ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ
ಕೊಂದಪೆಂ ಪಾರ್ದನ ಪತಾಕಿನಿಯನವನದಟ
ನಂದಗೆಡಿಸುವೆನೆನ್ನ ವಿಕ್ರಮವನಚ್ಯುತನ
ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲುವುದು ಪುಣ್ಯವಶಮೆಂದನು॥೫॥

ಅನಿತರೊಳ್ ಕುವಲೆಯೆಂಬುವಳೋರ್ವಳಾ ಸುಧ
ನ್ವನ ಸಹೋದರಿ ತಂದಳಿರತೀಯನನುಜ ಕೇ
ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾವನ
ಮನೆಯೊಳಾಂ ತಲೆಯೆತ್ತೀ ನಡೆವೆನೆಂತದರಿಂದೆ
ವನಜಾಕ್ಷನಂ ಮೆಚ್ಚಿಸಾಹವದೊಳೆಂದು ಚಂ
ದನದ ನುಣ್ಪಿಟ್ಟು ಕಪ್ಪುರವೀಳೆಯಂಗೊಟ್ಟು ಕಳುಹಿದಳ್ ಸೇಸೆದಳೆದು ॥೬॥

ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ
ಪರೆಪಿರ್ದ ಸಂಪಗೆಯ ಪೂಗಳಂ ತನ್ನ ಮೆ
ಯ್ಯೊರಗೆ ಸರಿಯಾದಪುವೆ ನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ
ತರಳೆಯಂ ಕಡೆಗಣ್ಣೊಳೊಯ್ಯನೀಕ್ಷಿಸಿ ನಗುತೆ
ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು
ಭರದಿಂದೆ ಕೊಳುಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು ॥೧೧॥

ಕಾಂತೆ ಕೇಳಿಂದು ಸಮರದೊಳರ್ಜುನಂಗೆ ಮಾ
ರಾಂತವನ ಬಿಂಕಮಂ ಮುರಿವೆನಾಂ ಹರಿಬಕಸು
ರಾಂತಕಂ ಬಂದೊಡಾತನ ಮುಂದೆ ವಿಜಯಮಂ ತೋರಿಸುವೆನೆನ್ನ ಭುಜವಿಕ್ರಮನು
ನಾಂ ತಳೆವೆನಾರ್ಪಿಂದೆ ವಿಜಯಮಂ ಮೀರ್ದೊಡೆ ಭ
ವಾಂತರವನೈದಿ ಸನ್ಮುಕ್ತಿಯಂ ಪಡೆದಪೆಂ
ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು ॥೧೨॥

ಯುಕ್ತಮಲ್ಲಿದು ರಮಣ ನಿನಗೆ ಕೇಳ್ ಕಾದುವಾ
ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ
ಮುಕ್ತಿಯಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು
ವ್ಯಕ್ತದಿಂ ತನಗೊಂದಪತ್ಯಮುಲದಯಿಸದೊಡೆ ವಿ
ರಕ್ತಿಯಿಂ ಕೈವಲ್ಯಮಾದಪುದೆ ಸಮರಕು
ದ್ಯುಕ್ತನಪ್ಪಾತಂಗೆ ಸಂತಾನಮಿಲ್ಲದಿರಲಪ್ಪುದೇ ಹೇಳೆಂದಳು ॥೧೩॥

ಅದರಿಂದಮಾತ್ಮಜವಿವೇಕಮಿಲ್ಲದೊಡೆ ನನ
ಗಿದುವೆ ಜಲದೋದಯದ ಋತುಸಮಯಮೀ ಪದದೊ
ಳುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತಿದೊಡೆ ಬೆಳೆ ಬಾಳ್ಕೆಗೆ
ಕದನಕೈದುವವೇಳೆಯಲ್ಲೆನಲವಂ ಮುಂದೆ
ಬೆದೆಗಾಲಮುಂಟೆಂದೊಡವಳೆಣಿಸಿ ಮಳೆಗಳಂ
ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು॥೧೪॥

ರಮಣಿ ನೀನೆಂಬುದನುನಯಮಪ್ಪುದಾದೊಡಂ
ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರಮಟ್ಟು
ಸಮರಕಯ್ಯಂ ಪೋದನುಳಿದೆನಾದೊಡೆ ತಾತನಾಜ್ಞೆಗೊಳಗಾಗದಿರೆನು  
ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ
ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು
ಕಮಲಾಕ್ಷಿಯಂ ಮುದ್ದುಗೈದು ಬೀಳ್ಕೊಳ್ವಿನಂ ಕಾತರಿಸಿ ಮೇಲ್ವಾಯ್ದಳು ॥೧೫॥

ಅಂಗಮಿಲ್ಲದನ ಸಮರಂಗಮಂ ಪುಗಲಂಜಿ
ತುಂಗವಿಕ್ರಮವಿಜಯಸಂಗರಕೆಳಸುವೆನೆಂ
ಬಂಗವಣೆಯೆಂತುಟೆಂದಂಗನೆ ಬಲಾತ್ಕಾರದಿಂ ಗುರುಕುಚದ್ವಯವನು
ಸಂಗಡಿಸುವಂತಾರ್ಪಿನಿಂ ಗಾಢತರದೊಳಾ
ಲಿಂಗನಂಗೈದು ಕುಡಿಗಂಗಳಿಂದವನ ಮೊಗ
ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು ॥೧೬॥

ಸತಿಗೆ ಷೋಡಶದ ಋತುಸಮಯಮೇಕಾದಶೀ
ವ್ರತಮಲಂಘ್ಯಶ್ರಾದ್ಧಮಿನಿತೊಂದುದಿನಮೆ ಸಂ
ಗತಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿಸೆ
ಕೃತಭೋಜ್ಯಮಾದಪುದು ನಡುವಿರುಳ್ಗಳಿದಾ ವ
ನಿತೆಯನೊಡಗೂಬಹುದದರಿಂದ ಧರ್ಮಪ
ದ್ಧತಿಯನೀಕ್ಷಿಸಲಿವಳನಿಂದು ಮೀರುವುದು ಮತವಲ್ಲೆಂದವಂ ತಿಳಿದನು ॥೨೦॥

ತಾತನಾಜ್ಞೆಯನುಳಿದು ಕೃಷ್ಣದರ್ಶನಕೈದ
ದೀತರಳೆಗಿಂದು ಋತುದಾನಮಂ ಮಾಡಿದೊಡೆ
ಪಾತಕಂ ತನಗಿಲ್ಲಮೆಂದು ನಿಶ್ಚೈಸಿ ಬಳಿಕಾ ಸುಧನ್ವಂಮನದೊಳು
ಭೀತಿಯಂ ತೊರೆದು ಕಾಂತೆಯ ಕೂಡೆ ರಮಿಸಿದಂ
ಪ್ರೀತಿಯಿಂದುಗುರೊತ್ತು ಸರಸ ಚುಂಬನ ಲಲ್ಲೆ
ವಾತುಗಳರವನೇಮಗಲೆ ತಾಡನಪ್ರೌಢಿ ಬಂಧ ಸಮ್ಮೋಹನದೊಳು ॥೨೧॥

ಮನ್ವಾದಿಋಷಿಗಳಭಿಮತಮಿದೆಂದರಿದಾ ಸು
ಧನ್ವಂ ಋತುಸ್ನಾತೆಯಂ ಮೀರದೊಡಗೂಡಿ
ತನ್ವಿಯಂ ಬೀಳ್ಕೊಂಡು ಸಮರಕನುವಾಗಲಿರಲಿತ್ತ ಕುರುಕುಲದ ನೃಪರ
ಅನ್ವಯಕೆ ತೊಡವಾದ ನರನ ಹಯಮಂ ಕಟ್ಟು
ವನ್ವೇಷಣದೊಳಾಹವಕೆ ನಡೆಯುತತಿಬಲ ಸ
ಮನ್ವಿತಕುಮಾರನಂಸೇನೆಯೊಳ್ ಕಾಣದೆ ಕೆರಳ್ದಂ ಮರಾಳಕೇತು ॥೨೬॥

ಪೊರೆಯೊಳಿಹ ಸಚಿವರಂ ನೋಡುತವರೊಳ್ ಸುಮತಿ
ಗರಸಂ ನಿರೂಪಿಸಲವಂ ಕಡುಗಡಿಕರಾದ
ಚರರನಟ್ಟಿದೊಡವರ್ ಬರೆಸೆಳೆದು ನಗುತಿಹ ಸುಧನ್ವಂತುಡುಕಿ ಪಿಡಿದು
ಕರಯುಗಳಮಂ ನೇಣ್ಗಳಿಂ ಬಿಗಿದು ತಂದರತಿ
ಭರದಿಂದೆ ರಾಯನಿದ್ದೆಡೆಗಾಗಿ ಪೌರಜನ
ಪುರಜನಂ ಬೆರಗಾಗೆ ಕದ್ದಾತನಂ ಕೊಂಡುಬರ್ಪಂತೆ ನಿಷ್ಠರದೊಳು ॥೨೭॥

ಕಟ್ಟುಸಹಿತಾ ಸುಧನ್ವಂ ತಾತನಡಿಗೆ ಪೊಡ
ಮಟ್ಟೊಡೆ ಕೆರಳ್ದೆಲವೊ ಮೂಢಾತ್ಮ ನೀನೆನ್ನ
ಕಟ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು
ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ
ಧಟ್ಟಿಸಿ ಮರಾಳಧ್ವಜಂ ಕೇಳ್ದೊಡಡಿಗಿಟ್ಟ
ದಿಟ್ಟಿಯಿಂದಂಜುತೊಯ್ಯನೆ ಲಜ್ಜೆವೆರಸಿ ಬಿನ್ನೈಸಿದನವಂ ಪಿತಂಗೆ ॥೨೮॥

ಸತಿ ಸಂತತಿಗೆ ಬಯಸಿ ದಿನಗಳೆದುದಿನ್ನಿಲ್ಲ
ಋತುಸಮಯಮೆಂದೆನಗೆ ಪೇಳ್ದೊಡಲ್ಲಿದ್ದೆನೆನೆ
ಕೃತಕಮಿದು ನೂಕೀತನಂ ಕೃಷ್ಣದರ್ಶನದ ಕಾಲಮೊದಗಿರಲಿತ್ತಲು
ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ
ಹಿತ ಶಂಖ ಲಿಖಿತರಂ ಬೆಸಗೊಳ್ವೆನಿದಕೆ ನಿ
ಷ್ಕೃತಿಯನೆನರಸಾಜ್ಞೆಯೊಳವರ ಪೊರೆಗೆ ಚರರೈತಂದದಂ ಪೇಳ್ದರು ||೨೯||

ಆ ಚರರ ನುಡಿಗೇಳ್ದು ಶಂಖಲಿಖಿತರ್ ಬಂದು
ವಾಚಿಸಿದರೆಲೆ ಹಂಸಕೇತು ನೀನೇನನಾ
ಳೋಚಿಸುವೆ ನಿನ್ನ ತನಯನ ಮೇಲಣಾಶೆಯಿಂ ಭಾಷೆದಪ್ಪಿದೆಯಾದೊಡೆ
ಈ ಚಂಪಕಾಪುರದೊಳಿಹುದಿಲ್ಲ ನಾವು ಸ
ತ್ತಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ
ಭೂಚಕ್ರಪಾಲರಾತ್ಮಜರ ಮೊಗನೋಡಿದರೆ ಹೇಳೆಂದು ನುಡಿದರವರು ||೩೦||

ಬಳಿಕರಸನಾ ಸುಮತಿಯಂ ಕರೆದು ಪೇಳ್ದನೀ
ಖಳನಂ ಕಟಾಹ ಪೂರಿತ ತಪ್ತತೈಲದೊಳ್
ಮುಳುಗಿಸೆನಲವನೊಡೆಯನಾಜ್ಞೆಯಂ ಮೀರದಾತನ ಕೈಗಳಂ ಕಟ್ಟಿಸಿ
ತಳಪಳನೆ ಕುದಿವೆಣ್ಣೆಗೊಪ್ಪರಿಗೆ ಕಾಯ್ವಲ್ಲಿ
ಗೆಳತರಿಸಿ ಮತ್ತೆ ಪೊತ್ತು ವೊಲುರಿವ ಪೆರ್ಗೊರಡು
ಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗುತೆ ಸಚಿವನಿಂತೆಂದನು ||೩೧||

ತಾತ ನಿನಗಿಂತಾಗಬಹುದೆ ಲೋಕೈಕ ವಿ
ಖ್ಯಾತನಭಿಮಾನಿ ಹರಿಸೇವಕಂ ಸುಂದರಂ
ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖಿ ಸಕಲಸಜ್ಜನಸಖಂ
ನೀತಿವಿದನಾಚಾರಸಂಪನ್ನನುತ್ತಮಂ
ದಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ
ನೀತಪ್ತತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು ||೩೨||

ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ
ಮಂ ಜರರಿವಿಡುವನಲ್ಲ ತಾನಿನ್ನೆಗಂ ಧರ್ಮ
ಮಂ ಜಡಿದು ನಡೆದುದಿಲ್ಲಾಹವದೊಳಹಿತರೊಳ್ ಪೊಯ್ಯಾಡಿ ಮಡಿವೊಡಲಿದು
ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ
ಡಂ ಜನಾರ್ಧನನಂ ಶರಣ್ಬು ಗುವೆನಳುಕದೆ
ನ್ನಂ ಜನಕನಾಜ್ಞೆದಪ್ಪದೆ ಹಾಯ್ಕಿಸೆನಲವಂ ತೆಗೆದೆತ್ತಿಬಿಸುಡಿಸಿದನು ||೩೩||

ಭೋಯೆಂದುದಖಿಳ ಪರಿವಾರಮಡಿಗಡಿಗೆ ಹಾ
ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ
ತಾ ಯೆಂದುಪೊರಳ್ದುದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು
ವಾಯಕಿಂತಕಟ ಸುಕುಮಾರನಂ ಕೊಂದನೀ
ರಾಯನರಿವಂ ನೆರೆ ಸುಡಲಿ ಶಂಖಲಿಖಿತರೆಂ
ಬೀ ಯಮೋಪಮರೇಕೆ ಜನಿಸಿದರೊ ಭೂಸುರರೊಳೆಂದು ಮೊರೆಯಿಡುತಿರ್ದುದು ||೩೪||

ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ
ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ
ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ
ಇಂದು ಮೊರೆವೊಗುವೊಡಾರಂ ಕಾಣೆನಕಟ ಗೋ
ವಿಂದ ನೀನಲ್ಲದೆ ವಿಚಾರಿಸುವರಿಲ್ಲ ಸಲ
ಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು ||೩೫||

ಜಯಜಯ ಜನಾರ್ಧನ ಮುಕುಂದ ಮುರಮರ್ದನ ವಿ
ಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲ
ನಯನ ಪೀತಾಂಬರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ
ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ
ಲಯಧೇನು ಭಕ್ತವತ್ಸಲ ಕೃಪಾಕರ ಮಹಾ
ಭಯನಿವಾರಣ ನೃಸಿಂಹ ತ್ರಾಹಿಯೆನುತಿರ್ದನಾ ಸುಧನ್ವಂ ಮರೆಯದೆ ||೩೬||

ಅರಸ ಕೇಳಾಶ್ಚರ್ಯಮಂ ನೋಡಲೆವೆ ಸೀವೊ
ಲುರಿಗೊಂಡು ಕಡುಗಾಯ್ದು ತಳಪಳದೆ ಕುದಿದುಕ್ಕಿ
ಮೊರೆವುರುಕಟಾಹತೈಲಂ ಮೈಗೆ ಸೊಗಯಿಸುವ ಬಾವನ್ ನದಣ್ಪಾಗಿರೆ
ಕೊರಗದಾತನ ರೋಮ ವಡಗದಂಗದ ಸೊಂಪು
ಕೊರಳ ತುಲಸಿಯ ದಂಡೆ ಬಾಡದು ಮುಡಿದ ಪೂಗ
ಳರೆಗಂದವರಳ್ದುದು ಸುಧನ್ವ ಮುಖಾಂಬುಜಮಿನೋದಯದ ಕಮಲದಂತೆ ||೩೭||

ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್
ಪುಂಡರೀಕಾಕ್ಷನಂ ಬಳಿಕ ಲಿಖಿತಂ ಖಾತಿ
ಗೊಂಡಿವಂ ಬಲ್ಲನಗ್ನಿಸ್ತಂಭವಂ ನಾರಿಕೇಳಂಗಳಂ ತರಿಸೆನೆ
ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನಭೋ
ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ
ಗಂಡಸ್ತಳಂಗಳಂ ಸಿಡಿವೋಳ್ಗಳಾಗಳುಂ ನಗುತಿರ್ದನಾಕುವರನು ||೩೮||

ನಿಶ್ಚಲಹೃದಯನಾಗಿ ವಿಷ್ಣುನಾಮಂಗಳಂ ಪು
ನಶ್ಚರಣೆಯಿಂದವಂ ಸುಖದೊಳಿರುತಿರೆ ಕಂಡು
ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದ್ರೋಹಮಂ ಮಾಡಿದ
ದುಶ್ಚರಿತಕಾವುದುಂ ನಿಷ್ಕೃತಿಗಳಿಲ್ಲೆಂಬ
ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ
ಯಶ್ಚಿತ್ತಮೆಂದಾ ಕಟಾಹದೊಳ್ ಕುದಿವೆಣ್ಣೆಯೊಳ್ ಬಿದ್ದನಾ ಲಿಖಿತನು ||೩೯||

ಆ ತಪ್ತತೈಲದ  ಕಟಾಹದೆಡೆ ಲಿಖಿತಂಗೆ
ಶೀತಳಸ್ಥಳಮಾದುದಾ ಸುಧನ್ವನ ಸಂಗ
ಮೇತರತಿಶಯಮೊ ಹರಿಭಕ್ತರಂ ಸಾರ್ದಂಗೆ ತಾಪಮಿರ್ದಪುದೆ ಬಳಿಕ
ಆತಗಳ್ ಕುದಿವೆಣ್ಣೆಯೊಳ್ ಸುಖದೊಳಿರೆ ಹಂಸ
ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು
ಪ್ರೀತಿಯಿಂದವರೀರ್ವರಂ ತೆಗೆದು ತಕ್ಕೈಸಿದಂ ಸುತಪುರೋಹಿತರನು ||೪೦||

ಹದಿನೇಳನೆಯ ಸಂಧಿ
ಬಭ್ರುವಾಹನನ್ನು ತಿರಸ್ಕರಿಸುವುದು

ಬಳಿಕಾ ಮಹಾಸ್ಥಾನದೊಳ್ ಬಭ್ರುವಾಹನಂ
ನಲವಿಂದೆ ಕುಳ್ಳಿರ್ದು ನಗುತೆ ಪರಮಂಡಲ
ಸ್ಥಳದಿಂದೆ ಬಂದ ರಾಯರ ಯಜ್ಞತುರಗಮಂ ಕಟ್ಟಿಕೊಂಡೆವು ಮನೆಯೊಳು
ಕೊಳುಗುಳಕೆ ಮಿಡುಕುವರ್ ನಾಳೆ ನಾವಿನ್ನು ಹಿಂ
ದುಳಿಯಬಾರದು ಕದನಕನುವಾಗಿರಲಿ ಪಾಯ
ದಳಮೆಂದು ನುಡಿದಂ ಸುಬುದ್ಧಿಮೊದಲಾಗಿಹ ಶಿರಃಪಪ್ರಧಾನಿಗಳ ಕೂಡೆ ||೩೦

ಇಂತಿಲ್ಲಿ ನಡೆದಖಿಲವತ್ತಾಂತಮಂ ಕೇಳ್ದ
ಳಂತಃಪುರದೊಳರ್ಜುನನ ಗುಣಾವಳಿಗಳಂ
ಸಂತತಂ ನೆನೆದು ಚಿಂತಿಪ ಬಭ್ರುವಾಹನನ ನಿಜಮಾತೆ ಚಿತ್ರಾಂಗದೆ
ಸಂತೋಷಮಂ ತಾಳ್ದು ತನಯನೋಲಗಕೆ ಭರ
ದಿಂ ತಳರ್ದಿದಿರೇಳ್ವ ಕುವರನಂ ತೆಗೆದಪ್ಪಿ
ಕುಂತೀಸುತನ ವಾಜಿಯಂ ಕಟ್ಟಿದೈ ಮಗನೆ ಲೇಸುಮಾಡಿದೆ ಯೆಂದಳು ||೩೧||

ಕ್ಷುದ್ರಬುದ್ಧಿಯನೆಲ್ಲಿ ಕಲಿತೆ ನೀನೀಪರಿ ಗು
ಗುರುದ್ರೋಹಕೆಂತು ತೊಡರ್ದುದು  ನಿನ್ನ ಮನಮಕಟ
ಮದ್ರಮಣನಾಗಮಂ ನಿನಗೆ ವಿರಹಿತಮಾದುದಾತನುದರದೊಳೆ ಜನಿಸಿ
ಉದ್ರೇಕದಿಂದೆ ಕಟ್ಟಿದೆಯಲಾ ತುರಗಮಂ
ಭದ್ರಮಾದುದು ರಾಜಕಾರ್ಯಮಿಂದಮೃತಕೆ ಸ
ಮುದ್ರಮಂ ಮಥಿಸೆ ವಿಷಮುದಿಸಿದವೊಲಾಯ್ತು ನಿನ್ನುದ್ಭವಂ ತನಗೆಂದಳು ||೩೨|

ಮಾತೆಯ ನುಡಿಗೆ ನಡನಡುಗಿ ಬಭ್ರುವಾಹನಂ
ಭೀತಿಯಿಂದಡಿಗೆರಗಿ ಕ್ಷತ್ರಿಯರ ಪಂತದಿಂ
ದಾತನ ತುರಗಮಂ ಕಟ್ಟಿದೆಂ ನಿಮ್ಮ ಚಿತ್ತಕೆ ಬಾರದಿರ್ದ ಬಳಿಕ
ನೀತಿಯಾದಪುದೆ ತನಗಿನ್ನು ನಿಮ್ಮಡಿಗೆ ಸಂ
ಪ್ರೀತಿಯೆಂತಾದಪುದದಂ ಬೆಸಸಿದೊಡೆ ಮಾಳ್ಪೆ
ನೇತಕಾ ತುರಮೆಂದು ಕೈಮುಗಿದೊಡಾಗ ಚಿತ್ರಾಂಗದೆ ನಿರೂಪಿಸಿದಳು ||೩೩||

ಮಗನೆ ಕೇಳೆನ್ನನೆಂದರ್ಜುನಂ ಬಿಟ್ಟು ನಿಜ
ನಗರಿಗೈದಿದನಂದು ಮೊದಲಾಗಿ ತಾನವನ
ನಗಲ್ದ ಸಂತಾಪದಿಂ ತಪಿಸುತಿರ್ದೆಂ ಪುಣ್ಯವಶದಿಂದೆ ಬಂದಶಂದು
ಬಗೆಯದಿರ್ದಪೆನೆಂತು ಕಾಂತನಂ ನೀನಿಂದು
ಮೊಗದೋರಿ ನಿನ್ನ ಸರ್ವಸ್ವಮಂ ತಾತನಂ
ಘ್ರಿಗೆ ಸಮರ್ಪಿಸಿದೊಡಾಂ ಮಾಡಿದ ತಪೋನಿಷ್ಠೆ ಸಫಲಮಾದಪುದೆಂದಳು ||೩೪||

ಕಂದ ನೀನಿಂದು ನಿನ್ನಖಿಳ ಪ್ರಕೃತಿಗಳಂ
ತಂದೆಗೊಪ್ಪಿಸಿ ಯುಧಿಷ್ಟಿರನೃಪನ ವೈರಿಗಳ
ಮುಂದೆ ತೋರಿಸು ನಿನ್ನ ಶೌರ್ಯಮಂ ತನುಧನಪ್ರಾಣಂಗಳವರದಾಗೆ
ನಿಂದೆಗೊಳಗಾಗದಿರ್ ದುಷ್ಟಸಂತಾನದಂ
ತೊಂದಿಸದಿರಗತಿಯಂ ತನ್ನ ಪಾತಿವ್ರತ್ಯ
ಕೆಂದು ಸೂನುಗೆ ಬುದ್ಧಿಗಲಿಸಿ ಪಾರ್ಥನ ಬರವಿಗುಬ್ಬಿದಳ್ ಚಿತ್ರಾಂಗದೆ ||೩೫||

ಜನನಿಯಂ ಮನೆಗೆ ಮನ್ನಿಸಿ ಕಳುಹಿ ಬಭ್ರುವಾ
ಹನನಾ ಸುಬುದ್ಧಿಯಂ  ನೋಡಿ ಪಿತನಂ ಕಾಣ್ಬು
ದನು ಚಿತವೊ ಮೇಣುಚಿತಮಾದಪುದೊ ಪೇಳಿದರ ನಿಶ್ಚಯವನೀಗಳೆನಲು
ನಿನಗೆಣಿಕೆ ಬೇಡ ಮೊದಲರಿಯದಾದೆವು ಧರ್ಮ
ತನಯಂಗೆ ನಿಮ್ಮಯ್ಯನನುಜಾತನಾತನ ರಕ್ಷೆ
ವಿನುತಹಯಕದನಿನ್ನು ಕಲಿತನದೆ ಕಟ್ಟುವುದು ನೀತಿಪಥಮಲ್ಲೆಂದನು ||೩೬||

ಇನ್ನು ಕಟ್ಟಿಸು ಗುಡಿಗಳಂ ಬೇಗ ಪಟ್ಟಣಕ್ಕೆ
ನಿನ್ನಖಿಳ ರಾಜ್ಯಪದವಿಯನೊಪ್ಪಿಸಯ್ಯಂಗೆ
ಮನ್ನೆಯರ್ ಚಾತುರಂಗದ ಸೇನೆ ನಾಗರಿಕಜನಮಲಂಕರಿಸಿಕೊಳಲಿ
ಕನ್ನೆಯರ್ ಲಾಜ ದಧಿ ದೂರ್ವಾಕ್ಷತೆಗಳಿಂದೆ
ಕನ್ನಡಿ ಕಳಸವಿಡಿದು ಬರಲಿ ಸಂದರ್ಶನಕೆ
ಸನ್ನುತ ಸುವಸ್ತುಗಳನೆಲ್ಲಮಂ ತೆಗೆಸು ತಡವೇಕೆಂದನಾ ಸುಬುದ್ಧಿ ||೩೭||

ವರಸುಬುದ್ಧಿಯ ಬುದ್ಧಿಯಂ ಕೇಳ್ದನಾ ಪಾರ್ಥಿ
ದೊರೆದೊರೆಗಳೆಲ್ಲರಂ ಕಳುಪಿದಂ ಮನೆಗಳ್ಗೆ
ಪುರದೊಳಗೆ ಡಂಗುರಂಬೊಯ್ಸಿದಂ ಕೋಶದ ಸುವಸ್ತುಗಳನು
ತರಿಸಿದಂ ಕನಕಪೂರಿತ ಶಕಟನಿಕರಮಂ
ತರುಣಿ ಗೋಮಹಿಷಿ ಮದಕುಂಜರ ಕುಲಾಶ್ವಮಣಿ
ವಿರಚಿತ ರಥಂಗಳಂ ರಜತ ಕಾಂಚನ ಮಯದ ಪಲವು ಕೊಪ್ಪರಿಗೆಗಳನು ||೩೮||

ನವ್ಯಚಿತ್ರಾಂಬರಾಭರಣಗಳಂ ವಿವಿಧ
ದಿವ್ಯರತ್ನಂಗಳಂ ಪರಿಪರಿಯ ಪರಿಮಳ
ದ್ರವ್ಯಂಗಳಂ ಕನಕ ಕಟ್ವ ನುತಹಂಸತೂಲದ ಮೃದುಲ ತಲ್ಪಗಳನು
ಸುವ್ಯಜನ ಚಾಮರ ಸಿತಾತಪತ್ರಂಗಳಂ
ಸವ್ಯಸಾಚಿಯ ಕಾಣಿಕೆಗೆ ತರುವುದೆಂದು ಕ
ರ್ತವ್ಯದಿಂ ಜೋಡಿಸಿದನಾ ಬಭ್ರುವಾಹನಂದಿರುಳಖಿಳ ವಸ್ತುಗಳನು ||೩೯||

ಅರಳ್ದ ಶೋಣಾಂಬುಜಚ್ಛಾಯೆಗಳಡರ್ದುವೆನೆ
ಭರದಿಂದೆ ಕತ್ತಲೆಯ ಮೇಲೆ ಬಹ ರವಿಯ ರಥ
ತುರಗ ಖುರಪುಟದಿಂದಮೇಳ್ವ ಕೆಂದೂಳ್ಗಳೆನೆ ಪ್ರಾಚೀನಿತಂಬವತಿಗೆ
ಸರಸದಿಂ ತರಣಿಯೊಳ್ ನೆರೆವ ಸಮಯದೊಳಾದ
ಕರರುಹಕ್ಷತದ ಕಿಸುಬಾಸುಳ್ಗಳೆನೆ ಸವಿ
ಸ್ತರದ ಸಂಧ್ಯಾರಾಗಮೈದೆ ರಂಜಿಸುತಿರ್ದುದಂದು ಮೂಡಣದೆಸೆಯೊಳು ||೪೧||

ಆದಿತ್ಯನುದಯದೊಳ್ ಫಲುಗುಣನ ಸೂನು ಸಂ
ಧ್ಯಾದಿಗಳನಾಚರಿಸಿ ವಸ್ತುಗಳನೈದೆ ಸಂ
ಪಾದಿಸಿ ಕಿರೀಟಿಯಂ ಕಾಣಲನುದರ್ಜುನನಿತ್ತಪಾಳೆಯದೊಳು
ಸಾಧಿಸಿ ಸಕಲ ನಿತ್ಯಕೃತ್ಯಮಂ ಮಾಡಿ ಮಧು
ಸೂದನನ ಚರಣಮಂ ನೆನೆದು ವೃಷಕೇತು ಮೊದ
ಲಾದ ವೀರರ್ಕಳಂ ಕರೆಸಿದಂ ಹಯಮಂ ಬಿಡಿಸಿಕೊಂಬ ತವಕದಿಂದೆ ||೪೪||

ಅರಸ ಕೇಳಾ ಬಭ್ರುವಾಹನನೊಡನೆ ಬಂದ
ಪರಿವಾರಮಾ ಪುರಜನಂಗಳಾ ಕಾಮಿನಿಯ
ರರಳ ಮಳೆ ಮುಕ್ತಾಫಲಂಗಳಂ ಸುರಿದರರ್ಜುನನ ಮಸ್ತಕದಮೇಲೆ
ವರಸುಬುದ್ಧಿ ಪ್ರಮುಖ ಮಂತ್ರಿಗಳ್ ಬಂದರೊ
ತ್ತರಿಸಿ ಕಾಣಿಕೆಗೊಂಡು ಬಳಿಕ ವಿಸ್ಮಿತನಾಗಿ
ನರನೆಲೆ ನೃಪಾಲ ನೀನಾರೆನಲ್ಕೆವನೆದ್ದು ಕೈಮುಗಿಯುತಿಂತೆಂದನು ||೪೯||

ಮಗುಳೆ ಮಗುಳಡಿಗೆರಗಿ ಭಯ ಭರಿತಭಕ್ತಿಯಿಂ
ಮಿಗೆ ಬೇಡಿಕೊಳುತೆ ಕಾಲ್ವಿಡಿದಿರ್ಪ ತನಯನಂ
ಮೊಗನೋಡಿ ಮಾತಾಡಿಸದೆ ಬೆರಗುವಡೆದಂತೆ ಕೆತ್ತುಗೊಂಡಿಹ ವಿಜಯನ
ಬಗೆಯನೀಕ್ಷಿಸಿ ಹಂಸಕೇತು ನೀಲಧ್ವಜಾ
ದಿಗಳೆಲ್ಲರುಂ ಸವಿಸ್ಮಯರಾಗಿ ಚಿಂತಿಸಿ ಕ
ರಗಿದರತಿ ಕರುಣರಸಭಾವದಿಂದೇನೆಂಬೆನಪಕೃತದ ಸೂಚಕವನು ||೫೦||

ಪ್ರದ್ಯುಮ್ನ ಹಂಸಧ್ವಜಾದಿಗಳ್ ಬಳಿಕಿದೇ
ನುದ್ಯೋಗಮೆಲೆ ಪಾರ್ಥ ನಿನ್ನ ತನುಭವನೀತ
ನುದ್ಯತ್ಪರಾಕ್ರಮಿ ಮಹಾವೈಭವಶ್ಲಾಘ್ನಭಿಮಾನಿ ಮಾನ್ಯನಿಳೆಗೆ
ಖದ್ಯೋತಸ್ನಿಭಂ ನಿನ್ನ ಹೋಲುವೆಯ ನಿರ
ವದ್ಯರೂಪಂ ಪದಾವನತನಾಗಿರ್ದಪಂ
ಹೃದ್ಯನಿವನಂ ಪರಿಗ್ರಹಿಸಿ ಮನ್ನಿಸದೇಕೆ ಸುಮ್ಮನಿರ್ದಪೆಯೆಂದರು ||೫೧||

ಭೂಪ ಕೇಳಿವರಿಂತೆನಲ್ಕೆ ಬಳಿಕರ್ಜುನಂ
ಕೋಪದಿಂದವನ ನಿಟ್ಟಿಸುತೆಂದನಾಗ ತಲೆ
ಪೋಪುದಕೆ ತನ್ನ ಕಾಲ್ಪಣೆಯೆಂಬ ಧರೆಯ ನಾಣ್ಣುಡಿ ತಪ್ಪದಾದುದೆನಲು
ಆ ಪುತ್ರನಹ ಬಭ್ರುವಾಹನನನೊದೆದೆಲವೊ
ನೀ ಪಂದೆ ಲೋಕದೊಳ್ ತನಗೆ ಸಂಭವಿಸಿದವ
ನೀಪರಿಯೊಳಂಜುವನೆ ಮೊದಲಶ್ವಮಂ ಕಟ್ಟಿ ಮತ್ತೆಬಿಡುವನೆ ಕಾದದೆ ||೫೨||

ಚಿತ್ರಾಂಗದೆಗೆ ವೈಶ್ಯನಿಂದೆ ಸಂಭವಿಸಿರ್ಹದ
ಪುತ್ರನಲ್ಲದೆ ತನಗೆ ಜನಿಸಿದೊಡೆ ಬಿಡುವೆಯಾ
ಕ್ಷತ್ರಿಯರ ಮತಮಂ ಸುಭದ್ರೆಗೆನ್ನಿಂ ಜನಿಸಿದಭಿಮನ್ಯು ತಾನೋರ್ವನೆ
ಶತ್ರುಗಳ ವಿಗಡಚಕ್ರವ್ಯೂಹದಲ್ಲಿಗೆ ಧ
ರಿತ್ರೀಶನಂ ಮೀರಿ ನಡೆದು ಸಂಗ್ರಾಮದೊಳ
ಮಿತ್ರಭಟರಂ ಗೆಲ್ದಳಿದನಾತನಲ್ಲದಾತ್ಮಜರುಂಟೆ ತನಗೆಂದನು ||೫೩||

ಜಂಬುಕಂ ಜನಿಸುವುದೆ ಸಿಂಗದುದರದೊಳಕಟ
ಹೆಂಬೇಡಿ ನೀನೆಲವವೊ ಕುಲಗೇಡಿ ತನ್ನ ಬಸಿ
ರಿಂ ಬಂದವನೆ ಖೂಳ ಕುದುರೆಯಂ ಕಾದದೇತಕೆ ತಂದೆ ಪಂದೆ ನಿನಗೆ
ಡೊಂಬಿನ ಚತುರ್ಬಲಮಿದೇಕೆ ಭೂಪಾಲರಾ
ಡಂಬರದ ಛತ್ರಚಮರಂಗಳೇತಕೆ ಬಯಲ
ಡಂಬಕದ ಕೈದುಗಳಿವೇತಕೆ ಸುಡು ಬಿಡು ಜೀವದಾಸೆಯಂ ಪೋಗೆಂದನು ||೫೪||

ಅಹಹ ನರ್ತಕಿಯಲಾ ಗಂಧರ್ವನಾಯಕನ
ದುಹಿತೃವಲ್ಲಾ ನಿನ್ನ ಮಾತೆ ಚಿತ್ರಾಂಗದೆಯೆ
ವಿಹಿತಮಲ್ಲಿದು ನಿನಗೆ ಭೂಮಿಪರ ವೇಶಮಂ ತಳೆದ ನಾಟಕದ ರಚನೆ
ಬಹಳ ಪೌರುಷಮಾದುದಿಂದು ಹಯಮಂ ತಡೆದ
ರಹಣಿ ರಾಯರಮುಂದೆ ಹೋಗೆಂದು ದುಷ್ಕೃತಿಯ
ಕುಹಕದಿಂ ಬೈದು ಭಂಗಿಸಿ ಜರೆದನಾತ್ಮಜನನರ್ಜುನಂ ಕೋಪದಿಂದೆ ||೫೫||

ಬಿರುನುಡಿಗಳಿಂ ತನ್ನ ಮೊಗನೋಡದರ್ಜುನಂ
ಜರೆದೊಡಾತನ ಬಗೆಯನಾ ಸುಬುದ್ಧಿಗೆ ತೋರು
ತುರೆ ಕನಲ್ದಿರದೆದ್ದುಪಳಿದೆಲಾ ಮಾತೆಯಂ ನನಗೆ ಸೀವರಿಸಿದೆಯಲಾ
ಅರಿಯಬಹುದಿನ್ನು ಕೇಳ್ ನಿನ್ನ ತಲೆಗೆಡಹದೊಡೆ
ಕುರುಹಿಟ್ಟು ನೀನಾಡಿದಿನಿತೆಲ್ಲಮಂ ದಿಟಂ
ಮರೆಯದಿರ್ ಸಾಕೆಂದು ತಿರುಗಿದಂ ಬಭ್ರುವಾಹನನಂದು ಕುದುರೆಸಹಿತ ||೫೬||

ಆಲಿಸಿದನಲ್ಲಿ ಪರಿಯಂತ ಜನಮೇಜಯಂ
ಮೇಲಣ ಕಥೆಯನೊಲ್ದು ಬೆಸಗೊಂಡನೆಲೆ ಮುನಿಪ
ಹೋಲಿಸಿ ನುಡಿದೆ ಸುರಪಫಲುಗುಣರ ಸಮರಮಂ ಕೇಳ್ವೆನದನಾಂ ನಿನ್ನೊಳು
ಹೇಳಬೇಹುದು ರಾಘವಂಗೆ ಸುತನೊಡನಾದ
ಕಾಳಗದ ಸಂಗತಿಯನೆನಗೆಂದೆನಲ್ಕೆ ಭೂ
ಪಾಲಂಗೆ ವಿರಚಿಸಿದನೀ ತೆರದೊಳಾ ತಪೋನಿಧಿ ಬಳಿಕ ಸಂತಸದೊಳು ||೫೯||

ಹದಿನೆಂಟನೆಯ ಸಂಧಿ

ಸಂಕ್ಷಿಪ್ತ  ರಾಮಾಯಣ

ಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ
ಜಾಪತಿಯ ಕುಶಲವರ ಸಂಗರದ ಕೌತುಕವ
ನಾಪನಿತನೊರೆವೆನಿಕ್ಷ್ವಾಕು ಮೊದಲಾದ ರವಿಕುಲದ ನೃಪರೇಳ್ಗೆಗಳನು
ವ್ಯಾಪಿಸಿದ ಸಂಪದಕೆ ನೆಲೆವನೆಯೆನಿಪ್ಪಯೋ
ಧ್ಯಾಪುರದೊಳವತರಿಸಿದಂ ಮಹಾವಿಷ್ಣುಸುತ
ರೂಪದಿಂ ರಾಮಾಭಿದಾನದೊಳ್ ಪುತ್ರಕಾಮೇಷ್ಠಿಯಿಂ ದಶರಥಂಗೆ ||೧||

ತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್
ಬಳೆದು ಲಕ್ಷ್ಮಣ ಭರತ ಶತೃಘ್ನರೊಡಗೂಡಿ
ತಳೆದು ಕೌಶಿಕನ ಮಖಮಂ ಕಾದು ತಾಟಕಿಯನೊರಸಿ ಮುನಿಸತಿಯಘವನು
ಕಳೆದು ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ
ಸೆಳೆದು ಹರಚಾಪಮಂ ಮುರಿದೊಲಿಸಿ ಸೀತೆಯಂ
ತಳೆದುತ್ಸವದೊಳಯೋಧ್ಯಾಪುರಿಗೆ ದಶರಥನೊಡನೆ ರಾಘವಂ ಬಂದನು ||೨||

ವರ್ಧಿಪ ಕುಮಾರಂಗೆ ಭೂಮೀಶ್ವರಂ ಬಳಿಕ
ಮೂರ್ಧಾಭಿಷೇಚನಂ ಮಾಡಲನುಗೈಯೆ ನೃಪ
ನರ್ಧಾಂಗಿ ತಡೆಯೆ ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದೆ
ಸ್ವರ್ಧಾಮಕಡರೆ ಕೇಳುತೆ ಭರತನಂ ಕಳುಹಿ
ದುರ್ಧರದರಣ್ಯಪ್ರವೇಶಮಂ ಮಾಡಿದಂ
ಸ್ಪರ್ಧಿಸುವ ದನುಜರಂ ಮುರಿದು ಮುನಿಗಳನೋವಿ ಸತಿಸಹಿತ ಕಾಕುತ್ಸ್ಥನು ||೩||

ದಂಡಕಾರಣ್ಯದೊಳಿರಲ್ಕೆ ಶೂರ್ಪಣಖೆ ಬಂ
ದಂಡಲೆಯಲಾಕೆಯಂ ಭಂಗಿಸಿ ಖರಾದ್ಯರಂ
ಖಂಡಿಸಿ ಕನಕಮೃಗ ವ್ಯಾಜ್ಯದಿಂದೈದೆ ಲಕ್ಷ್ಮಣನಗಲೆ ಕಪಟದಿಂದೆ
ಕೊಂಡೊಯ್ಯೆ ರಾವಣಂ ಸೀತೆಯಂ ಕಾಣದುರೆ
ಬೆಂಡಾಗಿವಿರಹದಿಂ ಬಿದ್ದಿಹ ಜಟಾಯುವಂ
ಕಂಡು ಪೊಲಬಂ ಕೇಳ್ದು ಸೌಮಿತ್ರಿಸಹಿತ ನಡೆದಂ ಮುಂದೆ ರಘುನಾಥನು ||೪||

ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ
ರಥಮಂ ಸಲಿಸಿ ಕರುಣದಿಂದಾಂಜನೇಯನಂ
ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ
ಮಥಿಸಿ ರಾವಣನ ಮೇಲಣ ರಾಜಕಾರಿಯದ
ಕಥನಕಾಳೋಚಿಸಿ ಕರಡಿಕಪಿಗಳಂ ನೆರಪಿ
ಪೃಥಿವಿಜೆಯನರಸಲ್ಕೆ ವೀರಹನುಮಂತನಂ ಕಳುಹಿದಂ ಕಾಕುತ್ಸ್ಥನು ||೫||

ಧೀಂಕಿಟ್ಟು ಶರಧಿಯಂ ದಾಂಟಿ  ಮೇದಿನಿಯ ಸುತೆ
ಗಂಕಿತದ ಮುದ್ರಿಕೆಯನಿತ್ತು ಬೀಳ್ಕೊಂಡು ನಿ
ಶ್ಯಂಕೆಯೊಳಶೋಕವನಮಂ ಕಿತ್ತು ದನುಜರಂ ಸದೆದಕ್ಷನಂಮರ್ದಿಸಿ
ಅಂಕದೊಳ್ ಬಳಿಕಿಂದ್ರಜಿತುವಿನ ಬ್ರಹ್ಮಾಸ್ತ್ರ
ದಂಕೆಯೊಳ್ ನಿಂದು ವಾಲದಿಗಿಕ್ಕಿದುರಿಯಂದೆ
ಲಂಕೆಯಂ ಸುಟ್ಟು ಬಂದೊಸಗೆವೇಳ್ದನಿಲಜನನಸುರಾರಿ ಮನ್ನಿಸಿದನು||೬||

ಗಣನೆಯಿಲ್ಲದ ಕಪಿಗಳಂ ಕೂಡಿಕೊಂಡು ತೆಂ
ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀ
ಷಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ
ರಣದೊಳಸುರರ ಕುಲದ ಹೆಸರುಳಿಯದಂತೆ ರಾ
ವಣ ಕುಂಭಕರ್ಣ ಮೊದಲಾದ ರಕ್ಕಸರನುರೆ
ಹಣಿದವಾಡಿದನುರವಣಿಸಿ ಧೂಳಿಗೋಟೆಯಂ ಕೊಂಡನಾ ರಘವೀರನು ||೭||

ರವಣನ ಪದಮಂ ವಿಭೀಷಣಂಗೊಲಿದಿತ್ತು
ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ
ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚೆ ವಿಜಯೋತ್ಸವದೊಳು
ಭೂವರಂ ಸೌಮಿತ್ರಿ ದಶಮಮುಖಾವರಜ ಸು
ಗ್ರೀವಾದಿಗಳ ಗಡಣದಿಂದಯೋಧ್ಯಾಪುರಿಗೆ
ದೂವಾಳಿಸಿದನಮಲ ಮಣಿಪುಷ್ಪಕದ ಮೇಲೆ ಭರತನಂ ಪಾಲಿಸಲ್ಕೆ ||೮||

ವರಪುಷ್ಪಕವನಿಳಿದು ಭರತಶತ್ರುಘ್ನರಂ
ಕರುಣದಿಂ ತೆಗೆದಪ್ಷಿ ಕೌಶಿಕವಸಿಷ್ಟಾದಿ
ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೈದೆ ನಮಿಸಿ
ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ
ಪರಿಜನಪ್ರಕೃತಿಗಳನಿರದೆ ಕಾಣಿಸಿಕೊಂಡು
ಬರವನೇ ಹಾರೈಸಿ ಕೃಶೆಯಾದ ಕೌಸಲೆಗೆ ರಾಮನಭಿವಂದಿಸಿದನು ||೯||

ಮೇಲೆ ತಾಳ್ದಂ ಶುಭಮುಹೂರ್ತದೊಳ್ ವಾರಿನಿಧಿ
ವೇಲೆಯಾದವನಿಯಂ ಪಟ್ಟಾಭಿಷೇಚನದ
ಕಾಲದೊಳ್ ಕಂಡರು ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು
ಮೂಲೋಕಮೈದೆ ಕೊಂಡಾಡೆ ಬಳಿಕುರ್ವಿಯಂ
ಪಾಲಿಸುತಿರ್ದನೊಂಬತ್ತು ಸಾಸಿರವರ್ಷ
ಮೋಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರೀತಿಯಿಂದೆ ||೧೧||

ಇಪತ್ತುಮೂರನೆಯ ಸಂಧಿ
ಬಭ್ರುವಾಹನ ಅರ್ಜುನರ ಕಾಳಗ

ಎಲೆ ಪಾರ್ಥ ವೈಶ್ಯಸಂಭವರಾವಹೆವು ನಿಮ್ಮ
ಬಲ ಸಮಾಜದೊಳಂಬುಗಳ ಪಸರಮಂ ಹರಹಿ
ಗೆಲುವಿನಗ್ಗದಲಾಭಮಂ ಪಡೆದವದಟರ ಶಿರಂಗಳಂ ಕೊಂಡೆವರಿಸಿ
ಕಲಿಗಳೈತಂದು ಜೀವಕೆ ಸಂಚಕಾರಮಂ
ಸಲೆ ಬೇಡಿದೊಡೆ ಕೊಟ್ಟೆವಿಚ್ಛೆಯುಳ್ಳೊಡೆ ನಿನ್ನ
ತಲೆಯ ಬೆಲೆಗಿದೆ ಸಾಹಸ ದ್ರವ್ಯಮೆನ್ನೊಳೆಂದಾರ್ಜುನಿಪಚಾರಿಸಿದನು ||೩೧||

ಇವರೊಳೇನಹುದಿನ್ನು ವೀರನೀ ಕರ್ಣಸುತ
ನಿವನ ತಲೆಯಂ ಸಮರ್ಪಿಸು ಮಹಾದೇವಂಗೆ
ತವೆ ರುಂಡಮಾಲೆಯೊಳ್ ಪೂಜ್ಯಮಾಗಿಹುದೀಶ್ವರನ ಪ್ರೀತಿಯಹುದು ನಿನಗೆ
ಶಿವನಂದು ಪಾಶುಪತ ಬಾಣಮಂ ಕೊಟ್ಟುದಿ
ಲ್ಲವೆ ನಿಜಸ್ವಾಮಿಯಂ ಮರೆದಪರೆ ಸಾಕಿದರ
ಬವಣೆಯೇತಕೆ ನಮಗೆ ಕಾದುವೆಯೊ ತುರಗಮಂ ಬಿಟ್ಟಪೆಯೊ ಪೇಳೆಂದನು ||೩೨||

ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ
ಮಾಡಿದಂ ಕೋಪಮಂ ಧೈರ್ಯದಿಂದಳಲನೀ
ಡಾಡಿದಂ ಕರ್ಣಜನ ಶಿರವನಲ್ಲಿರಿಸಿದಂ ಕೊಂಡನುರು ಕಾರ್ಮುಕವನು
ತೀಡಿದಂ ಜೇಗೈದು ತಿರುವಿನೊಳ್ ಬಾಣಮಂ
ಪೂಡಿದಂ ತೆಗೆದೆಚ್ಚು ರುಧಿರ ಪ್ರವಾಹವಂ
ತೋಡಿದಂ ಬಭ್ರುವಾಹನನಸರ್ವಾಂಗದೊಳ್ ಕಲಿಪಾರ್ಥನಾ ಕ್ಷಣದೊಳು ||೩೩||

ಮೈಸಿರಿಯಳಲ್ಗಳಿವು ಲೇಸಾಯ್ತು ಪಗೆಯ ಮಗ
ನೈಸಲೇ ಕರ್ಣಜಂ ಸಾಕಿವೇತಕೆ ಬರಿದೆ
ವೈಸಿಕದ ಬಾಣಪ್ರಯೋಗಂಗಳಿಂದ್ರ ಕೀಲದೊಳುಮಾಕಾಂತನಿಂದೆ
ಕೈಸಾರ್ದ ಸಾಯಕಮನುಗಿಯೆನುತ ಪಾರ್ಥನಂ
ಪೈಸರಿಸದೆಚ್ಚನೀ ಬಭ್ರುವಾಹನನ ಕಣೆ
ಗೈಸದು ನಭೋವಲಯಮೆನೆ ಕವಿದುವಂಬುಗಳ್ ದೇವತತಿ ಬೆರಗಾಗಲು ||೩೪||

ಮತ್ತವು ಮಸುಳ್ವಂತೆ ನರನಾರ್ದು ತೆಗೆದಿಸಲ್
ಪೆತ್ತುವು ಸರಳ್ಗಳೊಂದೊಂದಯುತ ನಿಯುತಮಂ
ಪೊತ್ತುವು ನಭಸ್ಥಳಕೆ ಕೊಂಡು ರಿಪುಸೇನೆಯಂ ತಾರೆಗಳನುದಿರಿಸಿದುವು
ಕಿತ್ತುವು ಕುಲಾದ್ರಿಗಳನಾಗಸದ ಬಟ್ಟೆಯಂ
ಕೆತ್ತುವು ದಿಗಂತಮಂ ತುಂಬಿದುವು ಬಾಣಂಗ
ಳಿತ್ತುವು ಜಗತ್ತ್ರಯಕೆ ಕಂಪಮಂ ಪಿಂತೆಂದುಮಿಲ್ಲಿದು ವಿಚಿತ್ರಮೆನಲು ||೩೫||

ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್
ತೆರೆದ ಜಾಳಾಂದ್ರದಂತಾಯ್ತುಗಿದ ಬಟ್ಟೆಗಳ್
ಕರೆದ ಪೆರ್ಮಳೆಯಿಂದೆ ನನೆದ ಜಾದಿನ ಗಿರಿಯೊಳಿರದಿಳಿವ ಕೆಂಬೊನಲ್ಗಳ
ತೆರದೊಳೆಸೆದುವು ರಕ್ತಧಾರೆಗಳ್ ಗಾಯದೊಳ್
ಮರೆದನೊಡಲಂ ನಿಮಿಷಕೊಡನೆ ತರಹರಿಸಿದಂ
ಜರೆದನರ್ಜುನನಂ ರಣಾಗ್ರದೊಳ್ ಮೂದಲಿಸಿ ಬಭ್ರುವಾಹನಂ ಕನಲ್ದು ||೩೬||

ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸು
ಪರ್ಣಧ್ವಜಂ ನಿನಗೆ ಕರುಣದಿಂ ಕಾದಿದ ನ
ಪರ್ಣಾಧವಂ ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು
ವರ್ಣಿಸುವರೆಂದು ಬೆರೆತಿಹೆ ತನ್ನ ಹಮರಮಂ
ನಿರ್ಣೈಸಿದೊಡೆ ವೀರನಹುದೆಂದು ಬಾಣಮಯ
ದರ್ಣವಮಿದೆತ್ತಣಿಂ ಮೇರೆದಪ್ಪಿದುದೆನಲ್ ಬಭ್ರುವಾಹನನೆಚ್ಚಲು ||೩೭||

ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ
ನೆತ್ತಿದುವು ಧರೆಯನುಚ್ಚಳಿಸಿ ಕೂರ್ಮನ ಬೆನ್ನ
ನೊತ್ತಿದುವು ಕಲಕಿದುವು ಸಾಗರವನಾದಿತ್ಯಮಂಡಲವನಂಡಲೆದುವು
ಮುತ್ತಿದುವು ಬಾಂದಳವನೆಲ್ಲಮಂ ಕೆಲಕೆಲವು
ಪತ್ತಿದುವು ಪರಿದುವಿಳಿದುವು ಸಕಲಲೋಕಕ್ಕೆ
ಬಿತ್ತಿದುವು ಭೀತಿಯಂ ಬಭ್ರುವಾಹನನ ಶರಜಾಲಮದನೇವೇಳ್ವೆನು ||೩೮||

ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ
ರ್ಥನ ಸತ್ವಮೆಳದಾಗಿ ಬರೆ ಕಂಡು ಬಭ್ರುವಾಹ
ಹನನೆಂದನೆಲೆ ಧನಂಜಯ ತನ್ನ ಜನನಿ ಚಿತ್ರಾಂಗದೆ ಪತಿವ್ರತೆ ಕಣಾ
ಅನಿಮಿತ್ತಮಾಕೆಯಂ ಪಳಿದ ಕಾರಣದಿಂದೆ
ನಿನಗೆ ಕೈಗುಂದುತಿದೆ ಸಾಕಿನ್ನು ಕೃಷ್ಣನಂ
ನೆನೆ ಮರುಳೆ ಮುರಹರನ ಸಾರತ್ತಮಿಲ್ಲದಾರಂ ಗೆಲ್ದೆ ಹೇಳೆಂದನು ||೪೧||

ಕ್ಷೋಣಿಗೋಸುಗ ಕೊಂದೆ ನೀನಂದು ಕರ್ಣನಂ
ಮೇಣವನ ತನಯನ ನೆಳಲ್ಗೆ ಸೇರದೆ ಮನದ
ಕೇಣದಿಂದೆನ್ನ ಕೈಯಿಂದ ಕೊಲಿಸಿದೆ ಸಾಕು ಹಗೆ ಹರಿದುದಿನ್ನು ನಿನಗೆ
ಪ್ರಾಣಮಂ ಕಾದುಬಿಡುವೆಂ ಪೋಗು ಬಿಲ್ಗೊಳಲ್
ತ್ರಾಣಮುಳ್ಳೊಡೆ ನಿಂದು ಚಿತ್ತದೊಳ್ ನೆನೆ ಚಕ್ರ
ಪಾಣಿಯಂ ಬಲಮಪ್ಪುದೆಂದು ಜರೆದಂ ಬಭ್ರುವಾಹನಂ ಫಲುಗುಣನನು ||೪೨||

ಹೊಣೆ ಹೊಕ್ಕಿದು ತಾಂ ಪಗೆವನಂ ಗೆಲ್ದೊಡಂ
ಮಾಣದೆ ರಣಾಗ್ರದೊಳ್ ಮಡಿದೊಡಂ ಕ್ಸಷತ್ರಿಯ
ರ್ಗೂಣೆಯಮೆ ಕರ್ಣನಂ ಕೊಂದೊಡೇನವನ ಸುತನಳಿದೊಡೇನಾಹವದೊಳು
ಕ್ಷೀಣಬಲನೇ ತಾನಕಟ ನೀಂ ಸಮರ್ಥನೇ
ಕಾಣಬಹುದೆನುತ ಭೀಮಾನುಜಂ ಕೋಪದಿಂ
ಬಾಣಂಗಳಂ ಮಗನಮೇಲೆ ಕರೆಯಲ್ಕವಂ ಪರೆಗಡಿಯುತಿಂತೆಂದನು ||೪೩||

ಪ್ರೀತಿಯಿಂ ದ್ರೋಣನಿತ್ತಂಬುಗಳ ಮನ್ಮಥಾ
ರಾತಿ ಮು ಖ್ಯಾಮರರ್ ಕೊಟ್ಟ ಬಾಣಂಗಳ
ಜ್ಞಾತಮಾದುವು ನಿನಗೆ ಮರುಳೆ ನಿನ್ನೊಡನಾಡಿ ಕೃಷ್ಣನಂ ಮರೆದೆಯಾಗಿ
ಏತಕಾಹವಮಿನ್ನು ಸಾಕೆನಲ್ ಫಲುಗುಣಂ
ಖಾತಿಯಿಂ ಮಗುಳಿಸಲ್ಕಾ ಬಭ್ರುವಾಹನಂ
ಘಾತಿಸಿದನಡಿಗಡಿಗೆ ಪಾರ್ಥನಂ ಜಾಹ್ನವಿಯ ಶಾಪದಿಂ ಕೈಗಿಡಲ್ಕೆ ||೪೪||

ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ
ಕುಜವಾರದುತ್ತರಾನಕ್ಷತ್ರದಂದು ವಾ
ರಿಜಮಿತ್ರನಸ್ತಮಯ ಸಮಯದೊಳ್ ಕೃಷ್ಣಯೆನುತರ್ಜುನನ ತಲೆ ಬೀಳಲು
ವಿಜಯೋತ್ಸವದೊಳೈದಿದಂ ಬಭ್ರುವಾಹನಂ
ನಿಜಪುರಕೆ ಗುಡಿ ತೋರಣದೊಳೆಸೆಯೆ ಬಣ್ಣಿಸಲ್
ಪ್ರಜೆಗಳಂಗನೆಯರಾರತಿ ಪುಷ್ಪ ದಧಿ ದೂರ್ವೆಯೊಳಿದಿರ್ಗೊಳಲ್ಕೆ ||೪೯||

ಮಿಗೆ ವಿಜಯೋತ್ಸವದಿಂದೆ ಪೌರಜನದೊಸಗೆಯಿಂ
ಬಗೆಬಗೆಯ ಸಿಂಗರದ ಪೆಣ್ಗಳ ಸೊಡರ್ಗಳಿಂ
ನಗರ ಪ್ರವೇಶಮಂ ಮಾಡಿದಂ ಬಭ್ರುವಾಹನನಿತ್ತಲರಮನೆಯೊಳು
ಸೊಗಸಿಂದುಲೂಪಿ ಸಹಿತಿರುತಿರ್ದಚಿತ್ರಾಂಗ  
ದೆಗೆ ಬಂದು ಸುದತಿಯರ್ ದೇವಿ ನೀನೇಂ ನೋಂತು
ಮಗನಂ ಪಡೆದೆಯೊನರನಂ ಕೊಂದು ಬರ್ಪನಾರತಿಗಳಂ ತರಿಸೆಂದರು ||೫೦||

ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ
ಸೂನು ಕಲಿ ಪಾರ್ಥನಂ ಸಮರದೊಳ್ ಕೊಂದು ಸುಂ
ಮಾನದಿಂದೈತಪ್ಪನೆಂದು ಪೊಗಳಲ್ ಕೇಳಿ ಹಮ್ಮೈಸಿ ಬಿದ್ದಿಳೆಯೊಳು
ಹಾ ನಾಥ ಕೆಟ್ಟೆನಕಟೆಂದು ಕಂಬನಿಯೊಳ
ಳ್ದಾನಾರಿ ದುಃಖಾರ್ತೆಯಾಗಲಂತಃಪುರದ
ಮೀನಾಕ್ಷಿಯರ್ ಕೂಡೆ ರೋದಿಸಲ್ ಪೆರ್ಚಿತು ವಿಷಾದರವಮರಮನೆಯೊಳು ||೫೨||

ಅಪಜಯಂ  ತನಗಾದುದಿಲ್ಲ ಸಂಗ್ರಾಮದೊಳ್
ವಿಪರೀತಮೇತಕಿಂತಾನಂದ ಕಾಲದೊಳ್
ಕುಪಿತಮುಖನಾಗಿ ತನ್ನಂಜರೆದೊಡರ್ಜುನನ ಶಿರವನರಿದೆಂ ಧುರದೊಳು
ರಿಪುಭಯಂಕರ ಕರ್ಣ ತನಯಂಗೆ ಸಂಗರದೊ
ಳುಪಹತಿಯನಿತ್ತೆಂ ಪ್ರಯಾಸದಿಂದದಕೆ ನೀಂ
ತಪಿಸಲೇಕೆಂದು ಕಣ್ಣೀರ್ದೊಡೆದು ಮಾತೆಯಂ ಸಂತೈಸಲಿಂತೆಂದಳು ||೫೩||

ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ
ವಾಸಿ ಬಂದುದೆ ನಿನಗೆ ಮತ್ಕಾಂತನಳಿದನೇ
ವಾಸವನ ಸೂನು ಮೃತನಾದನೇ ಧರ್ಮಾನುಜಂ ಪ್ರಾಣಮಂ ತೊರೆದನೇ
ವಾಸುದೇವನ ಸಖಂ ಮಡಿದನೇ ನಿನ್ನಂತ
ದಾಸುರ ಪರಾಕ್ರಮದೊಳಾತ್ಮಪಿತೃಘಾತಮಂ
ಹೇಸದೆಸಗಿದರುಂಟೆ ಸುಡಲಿ ಸುತರೇಕೆಂದಳಲ್ದಳಾ ಚಿತ್ರಾಂಗದೆ ||೫೪||

ಈ ಕರ್ಣಸೂತ್ರಮೀಕರ್ಣ ತಾಟಂಕಮೀ
ಶ್ರೀಕರಂ ನಿಜ ಜನನಿಗೇಕೆಂದು ಬಿಡಿಸಿದೈ
ಸಾಕಿನ್ನು ಮಗಮೊಮ್ಮಗರಳಿದುದಂ ಕೇಳ್ದೆಂತು  ಸೈರಿಪಳೊ ಕುಂತಿದೇವಿ
ಭೂಕಾಂತನೇಗೈದಪನೊ ಧರ್ಮರಾ ನವಿ
ವೇಕದಿಂ ಬಾಳ್ಕೆಗಿಡಿಸಿದೆಯೆಂದು ತನಯನಂ
ಶೋಕದಿಂ ಮಿಗೆ ಬೈದಳಲ್ವ  ಚಿತ್ರಾಂಗದೆಗುಲೂಪಿ ಬಳಿಕಿಂತೆಂದಳು ||೫೫||

ದೇವಿ ನಿಲ್ಲಿನ್ನಮರ್ಜುನನ ಮೃತಿ ಸಂಶಯಂ
ಭಾವಿಸುವೊಡೆನಗೊಂದು ಕುರುಪುಂಟು ತನ್ನ ಕೇ
ಳೀವನದೊಳಂದು ಪಾರ್ಥಂ ತನಗೆ ತೋರಿದಂ ದಾಡಿಮ ದ್ರುಮಮೈದನು
ಆವ ದಿನಕೊಣಗುವುವು ತರುಗಳಾ ದಿನಕೆನ್ನ
ಜೀವಕಳಿವಹುದೆಂದು ತಾನದಂ ನೋಡಿ ಬಹೆ
ನೀ ವಿಷಾದಂ ಬೇಡ ಸೈರಿಸೆನೆ ಕಳುಹಿದಳುಲೂಪಿಯಂ ಚಿತ್ರಾಂಗದೆ ||೫೬||

ಕ್ರೀಡಾವನಕೆ ಪೋಗಿ ನಿಮಿಷದೊಳಹೀಂದ್ರಸುತೆ
ನೋಡಿ ಬಂದಲ್ಲಿಯ ದವಾಗ್ನಿಯಿಂದಾ ಪಂಚ
ದಾಡಿಮ ದ್ರುಮಮೊಣಗಿತರ್ಜುನನ ಮೃತಿ ದಿಟಂ ನಡೆ ಪೋಪೆವಲ್ಲಿಗೆಂದು
ಪೀಡಿಸುವ ಶೋಕದಿಂ ಚಿತ್ರಾಂಗದೆಗೆ ನುಡಿಯೆ
ಕೂಡೆ ಪೊರಮಟ್ಟೆಲ್ಲರುಂ ರಣಕೆ ನಡೆತಂದು
ಜೋಡಾಗಿ ಬಿದ್ದಿರ್ದ ಕರ್ಣಸುತ ಪಾರ್ಥರಂ ಕಂಡಲ್ಲಿ ಕೆಡೆದಳಲ್ದರು ||೫೭||

ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆ
ಗೆಳಸಿದೈ ಜನಕಂಗೆ ಜನನಿಯರ್ ನಾವಿರ್ವ
ರುಳಿಯಲೇಕಿನ್ನಕಟ ವೈಧವ್ಯಮಂ ತಾಳಬಲ್ಲೆವೆ ಮಹೀತಳದೊಳು
ಸೆಳೆದು ಪೊಡೆ ಖಡ್ಗದಿಂದೆಮ್ಭೀಶಿರಂಗಳಂ
ಬಳಿಕೈದೆ ಭಾರ್ಗವಂ ಕೊಂದುದಿಲ್ಲವೆ ತಾಯ
ನಳುಕದಿರ್ ಪಿತನ ಮಾತೃದ್ವಯದ ವಧೆ ನಿನಗೆ ಸಫಲಮಾದಪುದೆಂದಳು ||೬೧||

ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ
ಪ್ರೀಯದಿಂ ಪೋಗಿ ಕಂಡೊಡೆ ತನುಜನಲ್ಲೆಂದು
ನೋಯೆ ನುಡಿದಾಹವಂ ಬೇಕೆಂದೊಡೀತನಂ ಕೊಂದೆ ನಾಂ ಪಪಂಥಮೆಂದು
ದಾಯತಪ್ಪಿದ ಬಳಿಕ ಪೇಳ್ದೊಡೇನಹುದಿನ್ನು
ಹೇಯಮಾದುದು ತನ್ನ ಬಾಳ್ಕೆ ಪಿತೃವಧೆಯೊಳೀ
ಕಾಯಮಂ ಬಿಡುವೆನೀಗಲೆ ನೋಳ್ಪುದೆಂದವಂ ಕಿಚ್ಚುವುಗಲನುವಾದನು ||೬೨||

ತಂದೆಯಂ ಕೊಂದುಳಿದನೆಂದು ಲೋಕದ ಜನಂ
ನಂದಿಸದೆ ಬಿಡದಿದಕೆ ನಿಷ್ಕೃತಿಗಳಂ ಕಾಣೆ
ನೊಂದು ಮಂತ್ರಧ್ಯಾನ ಜಪ ತೀರ್ಥ ಯಾಗ ಯೋಗಂಗಳಿಂ ಕಳೆದುಕೊಳಲು
ಸಂದಿಗ್ಧಮಾಗಿರ್ದ ಪಾತಕಂ ಪೋಪುದು ಮು
ಕುಂದಸ್ಮರಣೆಯಿಂದಮಮರ್ಜುನಂ ವೈಷ್ಣವಂ
ಬಂದುದಪಕೀರ್ತಿ ನಾಂ ನಾಚದೆಂತಿರ್ದಪೆಂ ಪುಗುವೆನಗ್ನಿಯೊಳೆಂದನು ||೬೩||

ಇಪ್ಪತ್ತೆಂಟನೆಯ ಸಂಧಿ

ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ
ಮುನ್ನೊರವನುಂಟು ಕೇರಳ ದೇಶದವನಿಪಂ
ಸನ್ನುತ ಗುಣೋದಯಂ ಮೇಧಾವಿಯೆಂಬವಂ ಬಲಯುತಂ ಬಳಿಕವಂಗೆ
ತನ್ನ ಪಟ್ಟದ ರಾಣಿಯೊಳ್ ಬಹಳ ಭಾಗ್ಯ ಸಂ
ಪನ್ನನೆಡದಂಘ್ರಿಗರುವೆರಳಾಗಿ ದಿವದೊಳು
ತ್ಪನ್ನನಾದಂ ಮೂಲನಕ್ಷತ್ರದಿಂದರಿಷ್ಟಂಶದೊಳ್ ಸುಕುಮಾರನು ||೧೪||

ಪುತ್ರೋತ್ಸವಂ ಮಾಡಿ ಕೆಲವು ದಿನಮಿರೆ ನೃಪಂ
ಶತ್ರುಗಳ್ ಬಂದು ನಿಜನಗರಮಂ ಮುತ್ತಿದೊಡೆ
ಕ್ಷತ್ರಧರ್ಮದೊಳವರೊಡನೆ ಯುದ್ಧರಂಗದೊಳ್ ಪೊಯ್ದಡಿ ಮಡಿಯೆ ಕೇಳ್ದು
ಚಿತ್ರಭಾನು ಪ್ರವೇಶಂಗೈದಳಂದು ಶತ
ಪತ್ರಲೋಚನೆ ಪತಿವ್ರತೆಯಾಗಿ ಬಳಿಕೆಲೆ ಧ
ರಿತ್ರೀಶ್ವರನ ರಾಜ್ಯಮಂ ತೆಗೆದುಕೊಂಡಹಿತರಾಳ್ದರದನೇವೇಳ್ವೆನು||೧೫||

ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮಟ್ಟು
ತೊಳಲಿ ಬಳಲುತೆ ಮೆಲ್ಲಮೆಲ್ಲನೈತಂದು ಕುಂ
ತಳ ನಗರಮಂ ಪೊಕ್ಕಳಲ್ಲಿ ಸಾಕಿದಳರ್ಭಕನನತಿಪ್ರೇಮದಿಂದೆ
ಎಳೆಯಂಗೆ ಬೇಕಾದುದಿಲ್ಲದಿರೆ ಮರುಗುವಳ್
ಪೊಳಲೊಳಗೆ ತಿರಿದು ಹೊರೆದಳಲುವಳ್ ಮುದ್ದಿಸಿ ಪ
ಸುಳೆಯಭಿನಯಂಗಳ್ಗೆ ಹಿಗ್ಗಿ ಬಿಸುಸುಯ್ವಳವಳನುದಿನದೊಳಾರ್ತೆಯಾಗಿ ||೧೬||

ಇಡೆ ತೊಟ್ಟಲಿಲ್ಲಾಡಿಸುವರಿಲ್ಲ ನಿನಗೆ ಪೊಂ
ದೊಡಿಗೆಯಿಲ್ಲಿರೆ ನಿಳಯವಿಲ್ಲ ಬಿಡದೆರೆವನೀ
ರ್ಕುಡಿವಾಲ್ಗಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿ ನಲಿವ ತಂದೆತಾಯ್ಗಳಿಲ್ಲ
ಪೊಡವಿಪತಿ ಕೇರಳಾಧೀಶ್ವರಂ ಪರಕೆಯೊಳ್
ಪಡೆದೆನಿದಕೀಗ ನಿನ್ನಂ ನೋಡುವೆನ್ನ ಕ
ಣ್ಣೊಡೆಯದಕಟಕಟೆಂದು ಬಿಸುಸುಯ್ದಳಲ್ದು ಮರುಗುವಳಾಕೆ ದಿನದಿನದೊಳು ||೧೭||

ಮೊಳೆವಲ್ಲುಗುವಜೊಲ್ಲು ದಟ್ಟಡಿ ತೊದಲ್ವನುಡಿ
ತೊಳತೊಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ
ಪೊಳೆವ ಕಣ್ಮಿಸುಪ ನುಣ್ಗದಪಿಗೆಣೆ ಚೆಲ್ವಪಣೆ ಕುರುಳ ಜೋಲಂಬೆಗಾಲು
ಸುಳಿ ನಾಭಿ ಮಿಗೆ ಶೋಭಿಪಧರದೆಡೆ ಬಟ್ಟದೊಡೆ
ನಳಿತೋಳಿಡಿದ ಧೂಳಿ ಸೊಗಯಿಸುವ ವರ ಶಿಶುವ
ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗುವಳಜಸ್ರಮವಳು ||೧೮||

ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ
ಲಾಲನೆಗಳಿಲ್ಲೆಂದಳಲ್ದು ಮರುಗುವಳೊಮ್ಮೆ
ಪಾಲಿಸಿದಳಿಂತು ನಡೆನುಡಿಗಳಂ ಕಲಿವಲ್ಲಿ ಪರಿಯಂತಮಾ ಶಿಶುವನು
ಮೇಲೆ ರುಜೆ ಬಂದಡಸಿ ವಿಧಿವಶದೊಳಾ ಧಾತ್ರಿ
ಕಾಲನರಮನೆಗೈದಿದಳ್ ಬಳಿಕ ಪಸುಳೆಗೆ ನಿ
ರಾಲಂಬಮಾಗಲಾ ಪಟ್ಟಣದೊಳೆಲ್ಲರ್ಗೆ ಕಾರುಣ್ಯಕೀಡಾದನು ||೧೯||

ಚೆಲ್ವಶಿಶು ಬೇದಿಯೊಳ್ ಬಂದು ದೇಸಿಗನಾಗಿ
ನಿಲ್ವಿನಂ ಕಂಡ ಕಂಡಬಲೆಯರ್ ಕರೆಕರೆದು
ಮೆಲ್ವ ತನಿವಣ್ಗಳಂ ಕಜ್ಜಾಯ ಸಕ್ಕರೆಗ ಳಂ ಕುಡುವರೆತ್ಯಿಕೊಂಡು
ಸೊಲ್ವ ಮಾತುಗಳನಾಲಿಸಿ ಮುದ್ದಿಸುವರೀವ
ರೊಲ್ವುದಂ ಮಜ್ಜನಂಗೈಸಿ ಮಡಿಯಂ ಪೊದಿಸಿ
ಮೆಲ್ವಾಸಿನೊಳ್ ಮಲಗಿಸುವರಳ್ತಿಯಿಂದೊಸೆದು ತಂತಮ್ಮ ಮಕ್ಕಳೊಡನೆ ||೨೦||

ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ
ತಿರುಗುತಿಹ ಬಾಲಕನ ರೂಪಮಂ ಕಂಡು ಕರೆ
ಕರೆದುಭವನಂಗಳ್ಗೆ ಕೊಂಡೊಯು ಗಣಿಕೆಯರ್ ತಮತಮಗೆ ಮೋಹದಿಂದೆ
ಸರಸ ಪರಿಮಳ ಸುಗಂಧಂಗಳಂ ತೀಡಿ ಕ
ತ್ತುರಿಯತಿಲಕವನಿಟ್ಟು ಕಂಮಲರ್ ಮುಡಿಸಿ ಕ
ಪ್ಪುರ ವೀಳೆಯಂಗೊಟ್ಟು ಮಡಿತೊಡಿಗೆಗಳಿನೈದಿ ಸಿಂಗರಿಸಿ  ಕಳುಹುತಿಹರು ||೨೧||

ಆಡುವೆಳೆಮಕ್ಕಳೊಡನಾಡುವಂ ಲೀಲೆ ಮಿಗೆ
ನೋಡುವಚ್ಚರಿಗಳಂ ನೋಡುವಂ ಬಾಲಕರ
ಕೂಡೆ ಮನೆಮನೆಗಳೊಳಗಾಡುತಿಹನೆಲ್ಲರ್ಗೆ ಮುದ್ದಾಗಿ ಮೋಹಿಸುವನು
ನೋಡುವರ ಪಾಡುವರನಾಡೆ ಸಾಧನೆಗಳಂ
ಮಾಡುವರನರ್ಥಿಯಿಂ ಬೇಡುವರ ನೆರವಿಯೊಳ್
ಕರೀಡಿಸುವನಾಪುರದ ರೂಢಿಸಿದ ಬೀದಿಯೊಳ್ ಪಸುಳೆ ಪರಪುಟ್ಟನಾಗಿ ||೨೨||

ಬಟ್ಟೆಯೊಳ್ ಪುಣ್ಯವಶದಿಂದರ್ಭಕನ ಕಣ್ಗೆ
ಪುಟ್ಟ ಸಾಲಗ್ರಾಮದದೊಂದು ರಮಣೀಯ ಶಿಲೆ
ಕಟ್ಟೆಸಕದಿಂದೆ ಕಾಣಿಸಲದಂ ತಾನೆತ್ತಿಕೊಂಡು ಕೆಳೆಯರ್ಗೆ ತೋರಿ
ಬಟ್ಟಗಲ್ಲಿಂತು ವರ್ತುಳದಿಂದೆ ಚೆಲ್ವಾಗಿ
ಪುಟ್ಟುವುದೆ ಪೊಸತೆಂದು ಪಿಡಿದಾಡುತೊಡನೆ ಬೈ
ತಿಟ್ಟುಕೊಂಬಂ ಬಾಯೊಳನವರತಮಿರಿಸಲ್ಕೆ ತನಗೆ ಮನೆಯಿಲ್ಲವಾಗಿ ||೨೩||

ತೊಳಪ ಸಾಲಗ್ರಾಮದುಪಲಮಂ ಬಾಲಕಂ
ಕೆಳೆಮಕ್ಕಳೊಡನಾಟದಶ್ಮಗೋಳಕಮೆಂದು
ತಿಳಿದಣ್ಣೆ ಕಲ್ಲೊಡ್ಡಿಗಳನಾಡುತದರಿಂದೆ ಗೆಲ್ ದೆಲ್ಲರಂ ಜರೆಯುತ
ಕಳಕಳಿಸಿ ನಗುತತಿಸ್ನೇಹದದಿಂ ಕ್ರೀಡೆಯಂ
ತಳೆದಾಗಳುಣಿಸುಗಳನುಂಬಲ್ಲಿ  ತನ್ನ ಕೈ
ದಳಿಕೆ ತಂದುಳಿದ ಪೊಳಿನೊಳಾವಗಂ ಬಾಯೊಳಿರಿಸಿಕೊಂಡಿರುತಿರ್ಪನು ||೨೪||

ಅಲ್ಲಿ ಕೆಳೆಯರೊಳಾಡುತಿರ್ದ ಶಿಶುವಂ ಕಂಡ
ರುಲ್ಲಾಸದಿಂದೆಸೆವ ಭೂಸುರರ್ ಬಾಲಕನ
ಸಲ್ಲಲಿತ ರಾಜಲಕ್ಷಣಕೆ ಬೆರಗಾದರವನಂಗಮಂ ನೋಡಿನೋಡಿ
ನಿಲ್ಲದನುರಾಗದಿಂದಾರ ಸುತನೀ ತರುಣ
ನೆಲ್ಲಿಂದ ಬಂದನೆಂದಾ ದುಷ್ಟಬುದ್ಧಿಯಂ
ಮೆಲ್ಲನೆ ವಿಚಾರದಿಂಕೇಳ್ದೊಡಾ ವಿಪ್ರರ್ಗೆ ನಗುತಾತನಿಂತೆಂದನು ||೨೬||

ಈಪುರದೊಳೆನಿತಿಲ್ಲನಾಥರಾಗಿಹ ಬಾಲ
ರೀಪರಿಯೊಳೆತ್ತಣವ ನಾರಸುತನೆಂದರಿಯೆ
ವೀ ಪಸುಳೆಯಂ ರಾಜಕಾರ್ಯದೊಳಗಿಹೆವಿದರ ಚಿಂತೆ ನಮಗೇತಕೆನಲು
ಆ ಪಾರ್ವರೆಂದಿರ್ದೊಡಂ ಚಾರುಲಕ್ಷಣದೊ
ಳೀ ಪೊಳಲ್ಗಗೀ ಕುಂತಳಾಧೀಶನಾಳ್ವ ನ
ಮ್ಮೀ ಪೊಡವಿಗೊಡೆಯನಹನೀತನಂ ನೀನಿರಿಸಿಕೊಂಡು ರಕ್ಷಿಪುದೆಷಂದರು ||೨೭|

ಕ್ರೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗ
ಭೀರ ನಿರ್ಮಲ ಜಲದೊಳೆಸೆವಂತೆ ಮನದೊಳ್ ಕ
ಠೋರತರ ಭಾವಮಂ ತಳೆದು ಬಹಿರಂಗದೊಳ್ ವಿನಯಮುಳ್ಳಾತನಾಗಿ
ಚಾರು ಲಕ್ಷಣದ ಶಿಶುವಂ ನೋಡಿ ಧರೆಯ ಬೃಂ
ದಾರಕರ ನುಡಿಗೊಪ್ಪಿದವೊಲಿರ್ದು ಬಳಿಕ ಸ
ತ್ಕಾರದಿಂದಾ ವಿಪ್ರರಂ ಕಳುಹಿದಂ ದುಷ್ಟಬುದ್ಧಿ ನಿಜಭವನದಿಂದೆ ||೨೮||

ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯಮೆನ
ಗೇಕಾಧಿಪತ್ಯಮಾಗಿರ್ದಪುದು ಮುಂದಿವಂ
ಭೂಕಾಂತನಾದಪಂಗಡ ವಿಪ್ರರೆಂದ ನುಡಿ ತಪ್ಪದೆನ್ನಾತ್ಮಜರ್ಗೆ
ಬಕಾದ ಸಂಪದಂ ಬಯಲಾಗಿ ಪೋಪುದೆಂ
ದಾ ಕುಮತಿ ಬೇರೊಂದುಪಾಯಮಂ ಚಿಂತಿಸಿ ಭ
ಯಾಕಾರದೊಡಲ ಚಂಡಾಲರಂ ಕರೆಸಿ ಬೆಸಸಿದನಾರುಮರಿಯದಂತೆ ||೨೯||

ಕಾನನಾಂತರದದೊಳೀ ತರಳನಂ ಕೊಂದು ನೀ
ವೇನಾದೊಡಂ ಕುರುಪುತಂದೆನಗೆ ತೋರ್ಪುದೆಂ
ದಾ ನರೇಂದ್ರನ ಮಂತ್ರಿ ಬೆಸಸಿದೊಡೆ ಪಶುಘಾತಕಿಗಳಾಡುತಿಹ ಶಿಶುವನು
ಹೀನ ದಯದಿಂದೆ ಪಿಡಿದೆತ್ತಿಕೊಂಡೊಯ್ದರ್ ಭ
ಯಾನಕದೊಳಂದು ಕೊಲೆಗೆಳಸಿ ಪ್ರಹ್ಲಾದನಂ
ದಾನವೇಶ್ವರನಾಜ್ಞಯಿಂ ಕಾಳರಕ್ಕಸರ್ ಬಂದು ಕೈದುಡುಕಿದಂತೆ ||೩೦||

ಪಾತಕಿಗಳೊಡಲೊಳಿಹ ಪರಮಾತ್ಮನಂತೆ ಯಮ
ದೂತರೆಳೆತಂದಜಾಮಿಳನಂತೆ ಕಾಕ ಸಂ
ಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ
ಶೀತಲ ಮರೀಚಿ ಲಾಂಛನದಂತೆ ಬಹಳ ಕೋ
ಪಾತಿಶಯದೊಳಗಿಹ ವಿವೇಕದಂತಾ ಪಶು
ಘಾತಕಿಗಳೆತ್ತಿಕೊಂಡೊಯ್ವ ಬಾಲಕನಿರ್ದನವರೆಡೆಯೊಳಂಜುತಳುತೆ ||೩೧||

ಪೆಗಲೊಳೇರಿಸಿ ಬನಕೆ ಚಂಡಾಲರೊಯ್ಯುತಿರೆ
ಮಿಗೆ ಬೆದರಿ ಭಯದಿಂದೆ ಬಾಲಕಂ ಬಾಯೊಳಾ
ವಗಮಿರಿಸಿಕೊಂಡಿರ್ಪ ದಿವ್ಯ ಸಾಲಗ್ರಾಮದುಪಲದತಿಮಹಿಮೆಯಿಂದೆ
ಬಗೆದೋರಲಾಗ ಮುರಹರ ಕೃಷ್ಣ ಕಮಲಾಕ್ಷ
ಖಗರಾಜಗಮನ ಸಲಹೆಂದು ಚೀರಿದೊಡವನ
ಮೊಗನೋಡಿ ಕರುಣದಿಂ ಕಟುಕರೆದೆ ಕರಗಿದುದದೆಂತೊ ಹರಿನಾಮದೇಳ್ಗೆ ||೩೨||

ಒಯ್ದು ಪಸುಳೆಯನರಣ್ಯದೊಳಿರಿಸಿ ಮರುಗಿ ಬಿಸು
ಸುಯ್ದು  ಪಶುಘಾತಕಿಗಳಾ ದುಷ್ಟಬುದ್ಸಧಿಯಂ
ಬಯ್ದು ಶಿಶುವಧೆಗಳುಕಿ ನಿಂದು ನೋಡುತೆ ಕಂಡರರ್ಭಕನೆಡೆದ ಕಾಲೊಳು
ಅಯ್ದಲ್ಲದೊಂದು ಬೆರಲಿರ್ಪುದಂ ಬಳಿಕದಂ
ಕುಯ್ದು ಕುರುಪಂ ಕೊಂಡು ತಮ್ಮ ದಾತಾರನೆಡೆ
ಗೆಯ್ದಿ ತೋರಿದೊಡವನವರ್ಗಳಂ ಮನ್ನಿಸಿ ಮಹೋತ್ಸವದೊಳಿರುತಿರ್ದನು ||೩೩||

ಇತ್ತಲಾ ವಿಪಿನದೊಳ್ ತನ್ನ ವದನದೊಳಿರ್ದ
ವೃತ್ತ ಸಾಲಗ್ರಾಮ ಶಿಲೆಯ ಪ್ರಭಾವದಿಂ
ದುತ್ತಮಶ್ಲೋಕನಂ ಭಜಿಸೆ ದಯೆಗೈದೆಡದ ಕಾಲ ಷಷ್ಠಾಂಗುಳಿಯನು
ಕತ್ತರಿಸಿಕೊಂಡುಳುಹಿ ಪೋದರಂತ್ಯರ್ ಬಳಿಕ
ತುತ್ತಿಸಿದ ರಾಹು ತೊಲಗಿದ ಶಶಿವೊಲಿಲರ್ದ ನವ
ನೆತ್ತಣದ ಬಾಧೆಗಳ್ ನರ ನಿನ್ನ ಮಿತ್ರನಂ ಮರೆವೊಕ್ಕ ಜೀವಿಗಳ್ಗೆ ||೩೪||

ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆ
ಪಸುಳೆ ಹರಿಹರಿಯೆಂದೊರಲ್ದಳುತಿರಲ್ ಕಣ್ಣೊ
ಳೊಸರ್ವ ಬಾಷ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡು ಶೋಕದಿಂದೆ
ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ
ರಿಸುತಿರ್ದುವಾ ಶಿಶುವನೆಂದೊಡೆಲೆ ಪಾರ್ಥ ಕೇಳ್
ವಸುಮತಿಯೊಳಾರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ ||೩೫||

ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿ
ಲೆರಕೆಯಿಂ ಬೀಸಿ ಬಿಜ್ಜಣವಿಕ್ಕಿತಂಚೆ ತುಂ
ತುರನುದುರ್ಚಿತುಸಾರಸಂ ಸಲಿಲದೊಳ್ ನೆನೆವ ಪಕ್ಕಂಗಳಂ ಬಿದಿರ್ಚಿ
ಮರುಗಿ ಮೆಲ್ನುದಿಯೊಳುಪಚರಿಸಿದುವು ಗಿಳಿಗಳ
ಕ್ಕರೊಳಳಿಗಳರ್ಭಕನ ರೋದನದ ಕೂಡಳುವ
ತೆರದೊಳ್ ಮೊರೆದುವಲ್ಲಿ ಕರುಬರಿದ್ಠದೂರಿಂದೆ ಕಾಡೊಳ್ಳಿತೆನಿಸುವಂತೆ ||೩೬||

ನಿಲ್ಲದೆ ನರಳ್ವ ಪಸುಳೆಯ ನಿರ್ಮಲಾಸ್ಯಮಂ
ಪುಲ್ಲೆಗಳ್ ಕಂಡು ಕಾನನಕೆ ಕಾಮಿಸಿ ತಮ್ಮ
ನಲ್ಲನೈತರಲುಮ್ಮಳಿಸಿ ವಾಹನವನರಸ ಬಂದ ಪೂರ್ಣೇಂದುವೆಂದು
ವಲ್ಲಭ ಸ್ಮಾಮಿಯಂ ಬೇಡಿಕೊಳುತಿರ್ಪುವೆನೆ
ಮೆಲ್ಲಮೆಲ್ಲನೆ ಪೊರೆಗೆ ಪೊದ್ದಿ ಬಾಲಕನಂಘ್ರಿ
ಪಲ್ಲವದ ರುಧಿರಮಂ ಕುಡಿ ನಾಲಗೆಗಳಿಂದೆ ಮಿಗೆ ಲೇಹನಂಗೈದುವು ||೩೭||

ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು
ಗೂಗೆಗಳ ಕಣ್ದೊಳಸು ಬಕನ ಮೌನದ ಬೆರಗು
ನಾಗದ ನಿರಾಹಾರಮಳಿಗಳ ಪರಿಭ್ರಮಣಮಿಭದ ಸೀತ್ಕಾರಂಗಳು
ಪೋಗಲಡಿಯಿಡಲರಿಯದಾರೈವ ಜನಮಿಲ್ಲ
ದಾಗಹನ ಗಹ್ವರದೊಳಳುವಶಿಶುವಂ ನೋಡ
ಲಾಗಿ ಬಂದೆಡೆಗೊಂಡ ದುಃಖಾತಿರೇಕಮೆಂಬಂತೆ ಕಾಣಿಸುತಿರ್ದುದು ||೩೮||

ಬಾಲಕನ ರೋದನದ ಕೂಡೆ ಬನದೇವಿಯರ್
ಗಾಳಿ ತೀಡಿದೊಡೆ ಭೋರೆಂಬ ತರುಲತೆಗಳಿಂ
ಗೋಳಿಟ್ಟರಗ್ನಿ ಜಲ ಭೂ ಗಗನ ವಾಯು ರವಿಶಶಿಗಳ್ ದೆಸೆವೆಣ್ಗಳು
ಹೇಳಲೇನಡವಿಯ ಚರಾಚರಂಗಳ ಜೀವ
ಜಾಲಂಗಳುರೆ ಮರುಗುತಿರ್ದುವನಿತರೊಳೊಂದು  
ಕೋಲಾಹಲದ ಘೋಷಮೆಲ್ಲಿಯುಂ ಕಿವಿಗಿಡಿದುದಾ ಮಹಾ ಕಾನನದೊಳು ||೩೯||

ದಿನಪನುಪಟಳದಿಂದೆ ನೆಲೆಗೆಟ್ಟು  ಪಲವು ರೂ
ಪನೆ ತಾಳ್ದು ವನವಾಸದುರುತಪದ ಸಿದ್ಧಿಯಿಂ
ಘನತೆಯಂ ಪಡೆದು ಮಿಗೆ ಪಗೆಯಾದ ಪಗಲಂ ತೊಲಗಿಪಂಧಕಾರಮೆನಲು
ಅನುಪಮದ ಕಾರೊಡಲ ಬೇಡವಡೆ ಬೇಂಟೆಗೆ ವಿ
ಪಿನದೊಳೈತರುತಿರ್ದುದಬ್ಬರದ ಬೊಬ್ಬೆಗಳ
ನಿನದದಿಂ ಜೀವಿಗಳ ಕೊಲೆಗೆಳಸಿದಂತಕನ ದೂತ ಸಂಘಾತದಂತೆ ||೪೦||

ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ
ಹರಿಯನೇ ಜಪಿಸುತಳುತಿಹ ಬಾಲನಂ ಕಂಡು
ಹರಿಯನಲ್ಲಿಯೆ ನಿಲಿಸಿ ನೋಡಿ ನಿಜ ಶಿರವನಲ್ಲಾಡಿ ತಾಂ ಮೃಗದ ಕೊಲೆಗೆ
ಹರಿತಂದ ಪಾಪಮತಿ ಪುಣ್ಯಮೊದವಿಸಿತು ಸುವಿ
ಹರಿಸುವೊಡೆ ಶಿವಶಿವಾ  ಪೊಸತೆಂದು ಹರ್ಷದ ಲ
ಹರಿಯೊಳೋಲಾಡಿದಂ ಕಡವರವನೆಡಹಿ ಸಂಧಿಸಿದ ಕಡುಬಡವನಂತೆ ||೫೪||

ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರ
ಸೆಳೆದು ಬಿಗಿಯಪ್ಪಿ ಕಂಬನಿದೊಡೆದು ಕೂಡೆ ಸ
ಗ್ಗಳೆಯ ನೀರಿನಿಂದ ಕಾಲ್ದುದಿಯೊಳ್ ಬಸಿವ ನೆತ್ತರಂ ತೊಳೆದು ಮೋಹದಿಂದೆ
ಗಳದೊಳುಬ್ಬುವ ಗದ್ಗದಂಗಳಂ ಸೈತಿಟ್ಟು
ತಿಳಿಪಿ ಲಾಲಾಸಿದಂ ಕುಳಿಂದಕಂ ಸೌಭಾಗ್ಯ
ನಿಳಯದರಕೆಯ ವಸುವನೊದವಿದಗ್ಗದ ಪುಣ್ಯದೊಡಲಸುವನಾ ಶಿಶುವನು ||೫೫||

ಎಡಬಲದೊಳಿಹ ತನ್ನವರೊಳಾ ಕುಳಿಂದಕಂ
ನುಡಿದನೀ ಬಾಲಕಂ ತನ್ನ ತಾಯ್ತಂದೆಗಳ
ನೊಡಹುಟ್ಟಿದವರ ಹಂಬಲಿಸದೆ ಮುರಾರಿಯಂ ನೆನೆವ ನದರಿಂದಿವಂಗೆ
ಒಡೆಯನಚ್ಯುತನಾದ ಕಾರಣಂ ಮೃತನಾಗ
ದಡವಿಯೊಳ್ ಜೀವಿಸಿದನೆಲ್ಲರ್ಗೆ ತನುಜರಂ
ಕುಡುವವಂ ಕೃಷ್ಣನೈಸಲೆ ತನಗೆ ಮಕ್ಕಳಿಲ್ಲೀತನೇ ಸುತನೆಂದನು ||೫೬||

ಪತ್ತು ವಿಧಮುಂಟು ಸುತರದರೊಳೌರಸ ಪುತ್ರ
ನುತ್ತಮಂ ಮೇಣಾತನಿಲ್ಲದೊಡೆ ಬಳಿಕಮೊಂ
ಬತ್ತು ಬಗೆಯೊಳಗೊಂದು ತೆರದ ಮಗನಾದೊಡಂ ಬೇಕಲಾ ಮಾನವರ್ಗೆ
ತತ್ತನಯರೊಳ್ ತನಗೆ ತಾನೆ ದೊರೆಕೊಂಡವಂ
ದತ್ತನಂದನನಿವಂ ತನಗೆಂದವಂ ಮುದದೊ
ಳೆತ್ತಿಕೊಂಡಶ್ವವನಡರ್ದು ಪರಿಜನಸಹಿತ ನಿಜಪುರಕೆ ಬರುತಿರ್ದನು ||೫೭||

ಮೃಗಯಾ ವ್ಯಸನದಿಂದೆ ಕಾನನಕೆ, ತಾಂ ಕೃಷ್ಣ
ಮೃಗದ ಕೂಡೈದಿದೊಡೆ ದೊರಕೊಂಡನೀ ಕೃಷ್ಣ
ಮೃಗ ಭಾವದರ್ಭಕಂ ಪಾಪಕೆಳಸಿದೊಡಾಯ್ತು ಪುಣ್ಯಮೆನುತಲ್ಲಿ ಮಡಿದ
ಮೃಗಜಾತಿಗಳನವರ್ಗೆ ವೆಚ್ಚಿಸಿ ನೆರೆದ
ಮೃಗಜೀವಿಗಳನೆಲ್ಲರಂ ಕಳುಹಿ ನಿಜಪುರಕೆ
ಮೃಗಧರನೊಲೆಸೆವ ಶಿಶುವಂ ಕೊಂಡು ಪರಿಜನದೊಡನೆ ಬಂದನುತ್ಸವದೊಳು ||೫೮||

ಮುಂದೆ ಪರಿತಂದು ಚರರರಿಪೆ ಸಿಂಗರಿಸಿದರ್
ಚಂದನಾವತಿಗೆ ಸಂಭ್ರಮದಿಂ ಕುಳಿಂದಕಂ
ಬಂದು ನಿಜ ಭವನಮಂ ಪುಗಲಿದಿರ್ವಂದು ನಲಿದವನ ಸತಿ ಮೇಧಾವಿನಿ
ಕಂದನಂ ತೆಗೆದೆತ್ತ್ತಿಕೊಳುತ ಬಿಗಿಯಪ್ಪಿ ಸಾ
ನಂದದಿಂ ಪೊರೆಯೇರಿದಳ್ ತನ್ನ ಬಂಜೆತನ
ಮಿಂದು ಪೋದುದು ಪುತ್ರವತಿಯಾದೆನೆನ್ನ ಪುಣ್ಯದ್ರುಮಂ ಫಲಿಸಿತೆಂದು ||೫೯||

ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ
ಬತ್ತಿದ ಸರೋವರಕೆ ನವ ಜಲಮೊದವಿದಂತೆ
ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತ ಭೂತಳದೊಳು
ಮತ್ತೆ ಸಂತಾನಮಿಲ್ಲದ ಕುಳಿಂದನ ಬಾಳ್ಕೆ
ಗುತ್ತಮ ಕುಮಾರನಾದಂ ಚಂದ್ರಹಾಸನೆನ
ಲುತ್ತರೋತ್ತರಮಪ್ಪುದಚ್ಚರಿಯೆ ಸುರಪುರದ ಲಕ್ಸ್ಮೀವರನ ಭಕ್ತರು ||೬೩||

ಇಪ್ಪತ್ತೊಂಭತ್ತನೆಯ ಸಂಧಿ

ಆಲಿಸೆಲೆ ಫಲುಗುಣ ಕುಳಿಂದಕನ ಭವನದೊಳ್
ಬಾಲಕಂ ಪೆರ್ಚುವ ಸುಧಾಂಶುಕಳೆಯಿಂ ನಗುವ
ಲೀಲೆಯಿಂ ಚಂದ್ರಹಾಸಂ ತಪ್ಪನೆಂಬಂತೆ ದಿನದಿನಕೆ ವರ್ಧಿಸುತಿರೆ
ಮೇಲೆ ಮೇಲೆಸೆದುದಾ ಪೊಳಲ ಸಿರಿ ವಿಮಲ ಗುಣ
ಶೀಲದಿಂ ಮೆರೆದುದೆಲ್ಲ ಜನಂ ಬಿಡದೆ ಕೊಡ
ವಾಲಂ ಕರೆದುವಾಕಳುತ್ತು ಬಿತ್ತದೆ ಬೆಳೆಯತೊಡಗಿತಿಳೆ ಮಳೆಗಳಿಂದೆ ||೨||

ಸೂಚಿತದ ಪೂರ್ವಜನ್ಮದ ಪುಣ್ಯಫಲದಿಂದೆ
ಯಾಚಿತದೊಳನುಪಮದ ಶಿಶು ನಿಧಾನಂ ತನಗೆ
ಗೋಚರಿಸಿತೆಂದು ನಲಿದಾ ಕುಳಿದನುಮವನ ರಾಣಿಯುಂ ದಿನದಿನದೊಳು
ಲೋಚನಂ ತಣಿಯೆ ನೋಡುತ ಹರ್ಷ ವಾರಿಧಿಯ
ವೀಚಿಯೊಳ್ ಮುಳುಗಾಡಿ ಪುತ್ರವಾತ್ಸಲ್ಯದಿಂ
ದಾ ಚಂದ್ರಹಾಸನಭ್ಯುದಯದೊಳ್ ಪೆರ್ಚಿದರನೇಕ ಸಂಪದಮೊದವಲು ||೩||

ಲಕ್ಷಣದೊಳೆಸೆವ ಸುಕುಮಾರನಂ ನಗರಿಗ
ಧ್ಯಕ್ಷನಾಗಿಹ ಕುಳಿಂದಂ ಕೆಲವು ದಿನದ ಮೇ
ಲಕ್ಷರಾಭಯಾಸಕಿರಿಸಿದೊಡೆ ಹರಿಯೆಂಬೆರಡು ವರ್ಣಮಲ್ಲದೆ ಪೆರತನು
ಅಕ್ಷಯಿಂದೀಕ್ಷಸದೆ ವಾಚಿಸದಿರಲ್ಕೆ ಗುರು
ಶಿಕ್ಷಿಸಿ ಕನಲ್ದು ಬರೆಯೆಂದೊಡಂ ಕೇಳದಿರೆ
ತತ್ಕ್ಷಣದೊಳಾತನೈತಂದವನ ತಾತಂಗದಂ ಪೇಳ್ದೊಡಿಂತೆಂದನು ||೪||

ಈತನೇಕಾದಶಿಯೊಳುಪವಾಸಮಂ ಮಾಳ್ಪ
ನೀತನಂ ಕಂಡು ನಾವೆಲ್ಲರುಮನುಷ್ಠಿಸುವೆ
ವೀತನಚ್ಯುತನ ಭಕ್ತನೀತನಿಂದೆನಗಪ್ಪುದಭ್ಯುದಯಮಿಹಪರದೊಳು
ಈತನಲ್ಲದೆ ಬೇರೆ ತನುಜಾತರಿಲ್ಲ ತನ
ಗೀತನಲ್ಲಿಯೆ ಜೀವಮಾಗಿರ್ಪೆನಾನದರಿ
ನೀತನೆಂತಾದೊಡಿರಲೀತಂಗೆ ಶಿಕ್ಷೆ ಬೇಡೆಂದಂ ಕುಳಿಂದನಂದು ||೫||

ಅಂದು ಮೊದಲಾಗಿ ತನ್ನಿಚ್ಚೆಯಿಂ ಚಂದ್ರಹಾ
ಸಂ ದಾನವಾರಿಯಂ ಬಿಡದೆ ಬಾಲಕ್ರೀಡೆ
ಯಿಂದುತ್ಸವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದೆ
ತಂದು ಫಲ ವರ್ಗಮಂ ಪೂಜೆಗೈದುಪವಾಸ
ದಿಂದ ಜಾಗರಣದಿಂದೇಕಾದಶೀ ವ್ರತವ
ನಂದದಿಂದಾಚರಿಪನಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು ||೬||

ಮೆಲ್ಲನಿಂತಿರಲೆಂಟನೆಯ ವರುಷಮಾಗಲ್ಕೆ
ನಿಲ್ಲದುಪನಯನಮಂ ವಿರಚಿಸಿ ಕುಳಿಂದಂ ಸ
ಮುಲ್ಲಾಸಮಂ ತಾಳ್ದನಂಗಸಹಿತಖಿಳ ವೇದಂಗಳಂ ನೀಯಿಗಳನು
ಸಲ್ಲಲಿತ ಶಬ್ಧಾದಿ  ಶಾಸ್ತ್ರಸಿದ್ಧಾಂತಂಗ
ಳೆಲ್ಲಮಂ ಗುರುಮುಖದೊಳಧಿಕರಿಸಿ ಬೇಕಾದ
ಬಿಲ್ಲವಿದ್ಯೆಯನರಿದು ಗಜ ತುರಗದೇರಾ ಟದೊಳ್ ಚತುರನಾದನವನು ||೭||

ವಿದಿತ ವೇದಾರ್ಥಮಂ ವಿಷ್ಣುವೆಂದರಿದು ಬಹು
ವಿಧ ಶಾಸ್ಯ್ರತತಿಗೆ ಹರಿ ಗತಿಯೆಂದು  ತಿಳಿದು ತಾ
ನಧಿಕರಿಸಿ ಬಳಿಕ ನಿಜಭಕ್ತಿಚಾಪಕೆ ಸತ್ವಗುಣವನಳವಡಿಸಿ ತನ್ನ
ಸುಧಿಯ ಶರಮಂ ಪೂಡಿ ಕೃಷ್ಣನಂ ಗುರಿಮಾಡಿ
ವಿಧುಹಾಸನನುಪಮ ಧನುರ್ವಿದ್ಯೆಯಂ ಜಗದೊ
ಳಧಿಕತರಮಾಗೆ ಸಾಧಿಸಿ ಪರಮ ಭಾಗವತ ಕಲೆಗಳಿಂದೆಸೆದಿರ್ದನು||೮||

ಷೋಡಶ ಪ್ರಾಯದೊಳವಂ ಪ್ರಬಲ ಭಟನಾಗಿ
ಮೂಡಿದಗ್ಗಳಿಕೆಯಿಂದೈದೆ ರಥಿಕರ್ಕಳಂ
ಕೂಡಿಕೊಂಡೈದಿ ನಿಜ ತಾತಂಗೆ ಮಲೆವ ಮನ್ನೆಯರೆಲ್ಲರಂ ಘಾತಿಸಿ
ಮಾಡಿದಂ ದಿಗ್ವಿಜಯಮಂ ಕುಳಿಂದಕನಾಳ್ವ
ನಾಡಲ್ಲದೆಣ್ದೆಸೆಯ ಸೀಮೆಗಳನೊತ್ತಿದಂ
ಪೂಡಿಸಿದನವರವರ ಮನೆಗಳ ಸುವಸ್ತುಜಾಲಂಗಳಂ ತನ್ನ ಪುರಕೆ ||೯||

ಹರಿಯನಾರಾಧಿಸದೆ ರಾಜ್ಯಮದದಿಂ ಸೊಕ್ಕಿ
ದರಿ ಭೂಪರಂ ಗೆಲ್ದು ಮಣಿ ಕನಕ ಮುಕ್ತಾಳಿ
ಕರಿ ತುರಗ ಮೊದಲಾದ ಮುಖ್ಯ ವಸ್ತು ಪ್ರತತಿ ಸಹಿತ ಪಟ್ಟಣಕೆ ಬರಲು
ಪುರದ ಸಿಂಗರದ ಮಂಗಳ ವಾದ್ಯರವದಬಲೆ
ಯರ ಸೊಡರ್ವೆಳಗಿನಾರತಿಗಳ ಮಹೋತ್ಸವದ
ಸಿರಿಯೊಳ್ ಕುಳಿಂದಂ ಕುಮಾರನನಿದಿರ್ಗೊಳಿಸಿ ಮತ್ತೆ ಕಾಣಿಸಿಕೊಂಡನು ||೧೦||

ತಾಯಿತಂದೆಗಳೀಗಳಿಂದಿರಾದೇವಿ ನಾ
ರಾಯಣರ್ ತನಗೆಂದು ಭಾವಿಸಿ ನಮಿಸಲವರ್
ಪ್ರೀಯದಿಂ ತನಯನಂ ತೆಗೆದಪ್ಪಿದರ್ ಬಳಿಕ ಪುರವೀಧಿಯೊಳ್ ಬರುತಿರೆ
ಆಯತಾಕ್ಷಿಯರಾಗಳಲರ್ಗಳಂ ಚೆಲ್ಲಿದರ್
ಕಾಯಜಾಕೃತಿಯೊಳೈತಹ ಚಂದ್ರಹಾಸನ ವಿ
ಡಾಯಮಂ ನೋಡುವ ಕಟಾಕ್ಷದ ಮರೀಚಿಗಳ ವೀಚಿಗಳ ವಿಕಿರದೊಡನೆ ||೧೧||

ನಿಳಯಕೈತಂದನುತ್ಸವದಿಂ ಕುಳಿಂದಕಂ
ಬಳಿಕ ತನ್ನಾಧಿಪತ್ಯವನಾತ್ಮಜಂಗೆ ಮಂ
ಗಳ ಮುಹೂರ್ತದೊಳಿತ್ತನಂದಿನಿಂ ಚಂದ್ರಹಾಸಂ ಪಾಲಿಸುವನಿಳೆಯನು
ತುಳುಕಾಡಿತಾನಾಡ ಸಿರಿ ಚಂದನಾವತಿಯ
ಪೊಳಲ ಸೌಭಾಗ್ಯಮಭಿವರ್ಧಿಸಿತು ವೈಷ್ಣವದ
ಬಳೆವಳಿಗೆಯಾದುದೆಲ್ಲಾ ಜನದೊಳಾಚಾರ ಗುಣ ದಾನ ಧರ್ಮದಿಂದೆ ||೧೨||

ರಾಯಂಗೆ ವರ್ಷವರ್ಷಕೆ ನಾವು ಕುಡುವ ಸಿ
ದ್ಧಾಯಮಂ ದುಷ್ಟಬುದ್ಧಿಗೆ ಸಲಿಸಿ ಬರ್ಪ ನಿ
ಷ್ಕಾಯುತ ದ್ರವ್ಯಮಂ ನೃಪನ ರಾಣಿಗೆ ಪುರೋಹಿತನಾದ ಗಾಲವಂಗೆ
ಪ್ರೀಯದಿಂದುಪಚರಿಸುವರ್ಥಮಂ ತತ್ಕಾಲ
ಕೀಯಬೇಕೆಲೆ ಮಗನೆ ಧನವನೊದವಿಸಿ ಕಳುಹ
ಸೂಯೆಗೀಡಾಗಬೇಡೆಂದು ನಿಜನಂದನಂಗಾ ಕುಳಿಂದ ಪೇಳ್ದನು ||೧೭||

ಪಿತನ ಮಾತಂ ಕೇಳ್ದು ಚಂದ್ರಹಾಸಂ ಮಹೀ
ಪತಿಗೆ ಮಹಿಷಿಗೆ ಮಂತ್ರಿ ದುಷ್ಟಬುದ್ಧಿಗೆ ಪುರೋ
ಹಿತ ಗಾವಲಂಗೆ ಸಲಿಸುವ ಧನವನದರ ಸಂಗಡಕೆ ತಾನಾಹವದೊಳು
ಪ್ರತಿಭೂಪರಂ ಜಯಿಸಿ ತಂದ ವಸ್ತುಗಳನಂ
ಕಿತದಿಂದೆ ಕಟ್ಟಿ ಶಕಟೋಷ್ಟ್ರಕರಿ ಭಾರಗಳ
ಶತ ಸಂಖ್ಯೆಯಿಂದೆ ಕಳುಹಿದನಾಪ್ತರಂ ಕೂಡಿಕೊಟ್ಟು ಕುಂತಳ ನಗರಿಗೆ ||೧೮||

ನೊಸಲೊಳೆಸೆವೂರ್ಧ್ವಪುಂಡ್ರದ ಸುಧೌತಾಂಬರದ
ಮಿಸುಪ ತುಳಸಿಯ ದಂಡೆಗಳ ಕೊರಳ ನಿಚ್ಚಳದ
ದಶನಪಙ್ಕ್ತಿಯ ವಿಕಿಲ್ಬಿಷಗಾತ್ರದಚ್ಛಸಾತ್ವಿಕ ಭಾವದಿಂದೆ ಮೆರೆವ
ಶಶಿಹಾಸನನುಚರರ್ ಬಂದು ಕಾಣಲ್ಕಿದೇಂ
ಪೊಸಶಕಟ ನಿಮಗೀಗಳೇಕೆ ಶುದ್ಧಿಸ್ನಾನ
ಮಸುವಿಡಿದಿಹನೆ ಕುಳಿಂದಕನೆಂದು ಶಂಕೆಯಿಂ ಕೇಳ್ದನಾ ದುಷ್ಟಬುದ್ಧಿ ||೨೦||

ಅಶುಭಕೋಟಿಯನೊರಸುವೇಕಾದಶೀ ವ್ರತಕೆ
ವಿಶದ ಸಲಿಲಸ್ನಾನಮಂದೆಮಗೆ ಸಮನಿಸಿತು
ಕುಶಲದಿಂ ಬಾಳ್ವಂ ಕುಳಿಂದನಾತನ ಸೂನು ಚಂದ್ರಹಾಸಂಗೆ ನಾಡು
ವಶವರ್ತಿಯಾಗಿರ್ಪುದವನಾಜ್ಞೆಯಿಂದುಭಯ
ದಶಮಿಯೊಳ್ ನಡೆವುದುತ್ಸವವಚ್ಯುತಂಗೆ ಕ
ರ್ಕಶಮಿಲ್ಲದಖಿಳಜನಮಂ ಬಿಡದೆ ಪಾಲಿಪಂ ಹರಿಭಕ್ತಿನಿರತನಾಗಿ ||೨೧||

ಸುತ್ತಲುಂ ದಿಗ್ವಿಜಯಮಂ ಮಾಡಿ ರಿಪು ನೃಪರ
ನೊತ್ತಿ ಭುಜಬಲದಿಂದೆ ಕಪ್ಪಮಂ ಕೊಂಡು ಬಂ
ದುತ್ತಮ ಸುವಸ್ತುಗಳನೆಂದುಮೀವರ್ಥಮಂ ಚಂದ್ರಹಾಸಂ ಕಳುಹಲು
ಪೊತ್ತು ತಂದಿಹೆವನೇಕ ದ್ರವ್ಯವರಮನೆಗೆ
ಹತ್ತು ನಿನಗೊಂದರೆಣಿಕೆಯೊಳೆಂದು ಲೇಖನವ
ನಿತ್ತೊಡೆ ಕುಳಿಂದಕನ ಸೇವಕರ್ಗಾ ದುಷ್ಟಬುದ್ಧಿ ಮಗುಳಿಂತೆಂದನು ||೨೨||}

ಏನಿದೆತ್ತಣ ಕೌತುಕದ ನುಡಿ ಕುಳಿಂದಂಗೆ
ಸೂನು ಜನಿಸಿರ್ದಪನೆ ಬಂಜೆಯಾಗಿಹಳವನ
ಮಾನಿನಿ ವಿಚಿತ್ರಮೆನಲಾಚರರ್ ಜೀಯ ಪುಸಿಯಲ್ಲವಂ ಬೇಂಟೆಗೈದೆ
ಕಾನನದ ಮಧ್ಯದೊಳನಾಥನಾಗಿಹ ಶಿಶು ನಿ
ಧಾನಮಿರೆ ಕಂಡೆತ್ತಿಕೊಂಡು ಬಂದನಾತ್ಮಜ ವಿ
ಧಾನದಿಂದೋವಿದಂ ಪ್ರೀತಿ ಮಿಗೆ ಚಂದ್ರಹಾಸಾಭಿಧಾನದೊಳೆಂದರು ||೨೩||

ಕೇಳಿ ವಿಸ್ಮಿತನಾದನಾ ದುಷ್ಟಬುದ್ಧಿ ನಾಂ
ಪಾಳಡವಿಯೊಳ್ ಪಸುಳೆಯಂ ಕೊಂದು ಬಹುದೆಂದು
ಹೇಳಿದೊಡೆ ಚಂಡಾಲರಂದುಳುಹಿ ಬಂದರಹುದೆಂದು ನಿಶ್ಚ್ಯೆಸಿ ಬಳಿಕ
ತಾಳಿದಂ ದ್ವೇಷಮಂ ಚಿತ್ತದೊಳ್ ಪೊರಗೆ ಕರು
ಣಾಳುಗಳ ತೆರದಿಂದವರ್ಗಳಂ ಮನ್ನಿಸಿ ನಿ
ಜಾಲಯಕೆ ತೆಗೆಸಿದಂ ಚಂದ್ರಹಾಸಂ ಕಳುಹಿದಗಣಿತ ಸುವಸ್ತುಗಳನು ||೨೪||

ಕಷ್ಟಮೇತಕೆ ಜೀಯ ಹರಿವಾಸರ ವ್ರತ
ಭ್ರಷ್ಟರಾದಪೆವೆಂಬ ಭಯಕೆ ನಿನ್ನಾಲಯದ
ಮೃಷ್ಟಾನ್ನಮಾವೊಲ್ಲೆದಿರ್ದೆವೈಸಲೆ ಗರ್ವದಿಂ ಬೇರೆಯಲ್ಲವೆಂದು
ದುಷ್ಟಬುದ್ಧಿಯ ಚಿತ್ತಮಂ ತಿಳುಹಿ ಮರುದಿನದೊ
ಳಿಷ್ಟಭೋಜನದದಿಂದೆ ಸನ್ಮಾನಮಂ ತಳೆದು
ಹೃಷ್ಟಮಾನಸರಾಗಿ ಬೀಳ್ಕೊಂಡು ತಿರುಗಿದರ್ ಚಂದ್ರಹಾಸನ ದೂತರು ||೨೬||


ರಿಪುಮಥನ ಕೇಳ್ ಕುಳಿಂದಂ ಬಹಳ ವೈಭವದೊ
ಳುಪಚರಿಸಿ ತನ್ನ ನಂದನ ಚಂದ್ರಹಾಸನಂ
ವಿಪುಲ ಪರಿತೋಷದಿಂದೊಡೆಯಂಗೆ ಕಾಣಿಕೆಯನಿಡಿಸಿ ಕಾಣಿಸಿದ ಬಳಿಕ
ವಿಪಿನದೊಳ್ ತನಗೀ ಕುಮಾರಕಂ ಮುಂಗೈದ
ತಪದ ಫಲದಿಂ ತಾನೆ ದೊರಕೊಂಡನೀತನಂ
ಕೃಪೆಯಿಂದೆ ನೀವೆ ತಾನೆ ಪಾಲಿಸವೇಳ್ವುದೆಂದು ನಿಜಪತತಿಗೆ ಕೈವರ್ತಿಸಿದನು ||೩೩||

ಗಾಡಿಸಿದ ನೃಪಲಕ್ಷಣದ ಚಂದ್ರಹಾಸನಂ
ನೋಡಿ ವಿಸ್ಮಿತನಾಗಿ ತನ್ನ ಮನದೊಳ್ ಪಿಂತೆ
ಮಾಡಿಸಿದ ಕೃತ್ಯಮಂ ನೆನೆದು ವಂಚಿಸಿದರೇ ಚಂಡಾಲರೆಮ್ಮನೆಂದು
ಕೂಡೆ ಮಮ್ಮಲಮರುಗಿ ಪುಸಿಗೆ ನಸುನಗುತ ಕೊಂ
ಡಾಡಿ ಮನ್ನಿಸಿ ತನಗೆ ನಿನ್ನ ಸುತನಂ ಕಂಡು
ಮೂಡಿತುತ್ಸವಮೆಂದನಾ ದುಡಷ್ಟಬುದ್ಧಿ ವಿನಯದೊಳಾ ಕುಳಿಂದನೊಡನೆ ||೩೪||

ಬಂಜೆಯಾಗದು ವಿಪ್ರರಂದೆನ್ನೊಳೆಂದ ನುಡಿ
ರಂಜಿಸುವ ರಾಜಲಕ್ಷಣದೊಳೊಪ್ಪುವನಿವಂ
ಭಂಜಿಸದೊಡೀ ಧರಣಿಗೀತನರಸಾದಪಂ ಬಳಿಕ ತನ್ನಾತ್ಮಜರ್ಗೆ
ಸಂಜನಿಸಲರಿದು ಭೂಪಾಲತ್ವಮಗ್ಗಳಿಕೆ
ಗಂಜುವವನಲ್ಲ ಬಲವಂತನಹನೀತಂಗೆ
ನಂಜನೂಡಿಸಿ ಕೊಲ್ವುಪಾಯಂ ಮಾಳ್ಪೆನೆಂದೆಣಿಸಿದಂ ದುಷ್ಟಬುದ್ಧಿ ||೩೭||

ರಾಕಾಶಶಾಂಕನಭ್ಯುದಮಂ ಕೆಡಿಸಿ ತ
ನ್ನಾಕಾರಮಂ ತೋರಿಸುವೆನೆಂಬ ಕತ್ತಲೆವೊ
ಲಾ ಕಮಲಲೋಚನನ ಭೃತ್ಯನಂ ಕೊಲಿಸಿ ತಾಂ ಬಾಳ್ವೆನೆಂಬುಜ್ಜುಗದೊಳು
ಆ ಕುಮತಿಯಹಮಂತ್ರಿ ಬಳಿಕೊಂದು ಲೇಖನವ
ನೇಕಾಂತದೊಳ್ ಬರೆದು ಮೇಣದಕೆ ಮುದ್ರೆಯಂ
ಜೋಕೆಯಿಂದಳವಡಿಸಿ ಶಶಿಹಾಸನಂ ನೋಡಿ ನಸುನಗುತಲಿಂತೆಂದನು ||೩೮||

ಉರ್ವ ಮಂತ್ರದ ಕಜ್ಜಮಿದು ಚಂದ್ರಹಾಸ ನೀ
ನೊರ್ವನೆ ಹಯಾರೂಢನಾಗಿ ನಾಲ್ವರ್ ಸೇವ
ಕರ್ವೆರಸಿ ರಾಜಧಾನಿಗೆ ಪೋಗಿ ತನ್ನ ಮಗ ಮದನಂಗೆ ಮುದ್ರೆಸಹಿತ
ಸರ್ವಜನಮರಿಯದಂತೀವುದೀ ಪತ್ರಿಕೆಯ
ನುರ್ವರೆಯೊಳಾವೆಸಗಿದತಿಶಯದ ಮಾಳ್ಕೆ ನ
ಮ್ಮಿರ್ವರೊಳ್ ಗುಪ್ತಮಾಗಿರಲೆಂದು ಕೊಟ್ಟನಾ ಮಂತ್ರಿ ತಲ್ಲೇಖನನವನು ||೩೯||


ತಿರಿದೆಳೆದಳಿರ್ಗಳಂ ಪಾಸಿ ಕುಳ್ಳಿರದೊಯ್ಯ
ನೊರಗಲ್ಕೆ ನಡುವಗಲ ಬಿಸಿಲಿಂದೆ ಮಾರ್ಗದೊಳ್
ನೆರೆ ಬಳಲ್ದಿಹ ಚಂದ್ರಹಾಸಂಗೆ ತಣ್ಣೆಲರ ಸೊಗಸಿಂದೆ ಕಣ್ಣೆವೆಗಳು
ಸೆರೆಗೊಂಡುವಾಲಿಗಳನಾತ್ಮೀಯ ಕೃತ್ಯಮಂ
ಮರೆದು ನಿದ್ರಾಲೋಲನಾಗಿ ಮಲಗಿದವನಂ
ಮಿರುಗುವಹಿತಲ್ಪದೊಳ್ ದೇವಪುರನಿಲಯ ಲಕ್ಷ್ಮೀವರಂ ಪವಡಿಸುವೊಲು ||೪೯||

ಮೂವತ್ತನೆಯ ಸಂಧಿ

ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ
ಕೇಳಿ ವೆಗ್ಗಳಿಸಿರ್ದ ಸಮಯದೊಳಲರ್ಗೊಯ್ವ
ಬೇಳಂಬದಿಂದೆ ಕೆಲಸಿಡಿದು ಬಂದಾ ವಿಷಯೆ ಚೂತದದ್ರುಮದ ನೆಳಲೊಳು
ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ ತಂ
ಗಾಳಿಗೊಡ್ಡಿದ ಮೆಯ್ಯ ಸೊಗಸಿಂದೆ ಮರೆದು ನಿ
ದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರಗಾದಳು ||೧೯||

ಒರ್ವರೊರ್ವರನಗಲ್ದಶ್ವಿನೀದೇವತೆಗ
ಳುರ್ವ ನಳಕೂಬರ ಜಯಂತಾದಿ ಸುರ ತನುಜ
ರುರ್ವರೆಗದೇಕೆ ಬಹರಿನಶಶಿಗಳಾದೊಡಿಹವುಷ್ಣಶೀತ ದ್ಯುತಿಗಳು
ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂ
ಧರ್ವರೊಳಗಾವನೋ ಮನುಜನಲ್ಲೆಂದವನ
ಸರ್ವಾಂಗಮಂ ಬಿಡದೆ ನೋಡಿದಳ್ ವಿಷಯೆ ವಿಷಯಾಸಕ್ತೆಯಾಗಿ ಬಳಿಕ ||೨೧||

ಬೆಚ್ಚೆರಳೆಗಂಗಳವನವಯವದ ಚೆಲ್ವಿನೊಳ್
ಬೆಚ್ಚುವಂಗಜನಾಗ ಕಿವಿವರೆಗೆ ತೆಗೆದು ತುಂ
ಬೆಚ್ಚಲರ್ಗೊಲಂತರಂಗದೊಳ್ ನಾಂಟಿದುವು ದಾಂಟಿದುವು ಗರಿಗಳೊಡನೆ
ಬೆಚ್ಚನಾದೆದೆಯಿಂದೆ ಕಾತರಿಸಿ ಮುದುಡುಗೊಂ
ಡೆಚ್ಚರಿಂದೇಳ್ವ ರೋಮಾಂಚದೊಳಾಸೆ ಮುಂ
ದೆಚ್ಚೆ ಬೆವರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳ್ವೆನು ||೨೨||

ದಿವಿಜೇಂದ್ರತನಯನ ಕೇಳೀ ತೆರದೊಳಾಗ ನವ
ಯುವತಿ ನಿಂದೀಕ್ಷಿಸುತ ಕಂಡಳವನಂಗದೊಳೆ
ಸೆವ ರುಚಿರ ಕಂಚುಕದ ತುದಿಸೆರಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು
ತವಕದಿಂ ಬಿಟ್ಟು ಮುದ್ರೆಯನೋಸರಿಸಿ ತೆಗೆದು
ವಿವರದೊಳ್ ತನ್ನ ತಂದೆಯ ಹೆಸರ ಬರಹಮಿರೆ
ಲವಲವಿಕೆ ಮಿಗೆ ನೋಡಿ ಹರ್ಷಪುಳಕದೊಳಂದು ನಿಂದೋದಿಕೊಳುತಿರ್ದಳು ||೨೪||

ಶ್ರೀಮತ್ಸಚಿವ ಶಿರೋಮಣಿ  ದುಷ್ಟಬುದ್ಧಿ ಸು
ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ
ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ
ಸೀಮೆಗರಸಾದಪಂ ಸಂದೇಹಮಿಲ್ಲಿದಕೆ
ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ
ಥಾಮಿತ್ರನಪ್ಷನೆಂದೀತನಂ ಕಳುಹಿದೆವು ನಿನ್ಶ ಬಳಿಗಿದನರಿವುದು ||೨೫||

ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ
ವಿತ್ತ ವಿದ್ಯಾವಯೋ ವಿಕ್ರಮಂಗಳಂ ನೀಕ್ಷಿ
ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನಿದರೊಳೆಮಗೆ
ಉತ್ತರೋತ್ತರಮಪ್ಪುದೆಂದು ಬರೆದಿಹ ಲಿಪಿಯ
ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ
ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು ||೨೬||

ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ
ಗೀತನರಸಹನೆಂದು ಕುಲಶೀಲ ವಿದ್ಯೆಗಳ
ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು
ಈತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂ
ದಾ ತಾತನಣ್ಣಂಗೆ  ಬರೆಸಿ ಕಳುಹಿದ ಪತ್ರ
ವೇ ತಪ್ಪದಿದು ವರ್ಣಪಲ್ಲಟದ ಮೋಸವೆಂದಬಲೆ ಭಾವಿಸುತಿರ್ದಳು ||೨೭||

ತಪ್ ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ
ಗೊಪ್ಪುವ ಯಕಾರಮಂ ಕೆಲಬಲದ ಮಾಮರದೊ
ಳಿಪ್ಪ ನಿರ್ಯಾಸಮಂ ತೆಗೆದು ಕಿರುವೆರಳುಗುರ್ಗೊನೆಯಿಂದೆ ತಿದ್ದಿ ಬರೆದು
ಅಪ್ಪನಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ
ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲಿರಿಸಿ
ಸಪ್ಪುಳಾಗದ ತೆರದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು ||೨೯||

ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ
ಬುಜ ಮಿತ್ರನಪರಾಹ್ಣಕೈದಲ್ಕೆ ನಿದ್ರೆಯಂ
ತ್ಯಜಿಸಿ ಮೊಗೊಳೆದು ಮುಕ್ಕುಳಿಸಿ ಕಪ್ಪುರವೀಳೆಯಂಗೊಂಡು ಬಳಿಕ ಬಿಗಿಸಿ
ನಿಜ ವಾಜಿಯಂ ಬಂದಡರ್ದನುಚರರ್ವೆರಸಿ
ಋಜುವಾದ ಶಕುನಂಗಳಂ ಕೇಳುತೊಲಿದು ಪೌ
ರ ಜನಮಿವನಾರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತಿರ್ದನು ||೪೨||

ಆ ನಗರದೊಳ್ ಕುಂತಳೇಶ್ವರನು ನಿರ್ಮಲ
ಜ್ಞಾನದಿಂ ಗಾಲವನ ಸೂಕ್ತಮಂ ಕೇಳುತ ಸ
ದಾನಂದ ಯೋಗಮಂ ಕೈಕೊಂಡು ದುಷ್ಟಬುದ್ಧಿಗೆ ವಿಚಾರಮನೊಪ್ಪಿಸಿ
ಧ್ಯಾನಪರನಾಗಿರ್ಪನದರಿಂದೆ ಪೊಳಲಂ ಪ್ರ
ಧಾನಿ ಪಾಲಿಪನವಂ ಪೊರಮಟ್ಟಿರಲ್ಕೆ ತ
ತ್ಸೂನು ಮದನಂ ಧುರಂಧರತೆವೆತ್ತಾ ಸಮಯಕೋಲಗದೊಳಿರುತಿರ್ದನು ||೪೩||

ನೀತಿ ಸಮ್ಮತದಿಂ ವಿವೇಕನಿಂತೆನೆ ಕೇಳ್ದು
ಶಾತಕುಂಭಾಲಂಕೃತಾಸನವನಿಳಿದು ಹ
ರ್ಷಾತಿಶಯದಿಂದೆ ಮದನಂ ಚಂದ್ರಹಾಸನನಿದಿರ್ವಂದು ಕಂಡು ನಗುತೆ
ಪ್ರೀತಿಯಿಂದಪ್ಪಿ ಕೈವಿಡಿದೊಡನೆ ಸಭೆಗೆ ತಂ
ದಾತನಂ ಸತ್ಕರಿಸಿ ಚಂದನಾವತಿಯ ತ
ದ್ಭೂತಳದ ಮೇಧಾವಿನಿಯ ಕುಳಿಂದನ ಕುಶಲದೇಳ್ಗೆಯಂ ಬೆಸಗೊಂಡನು ||೪೮||

ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದ
ರ್ಶನಮಿಂದಪೂರ್ವಮಾದುದು ಬಂದ ಕಾರ್ಯಮಂ
ತನಗೊರೆವುದೆಂದು ಮದನಂ ಚಂದ್ರಹಾಸನಂ ಕೇಳ್ದೊಡಾತಂಗೆ ನಿನ್ನ
ಜನಕನೆನ್ನಂ ನಿನ್ನಬಳಿಗತಿರಹಸ್ಯದಿಂ
ದನುಮತಿಸಿ ಕಳುಹಲಾನೈತಂದೆನೆಂದು ಕುರು
ಪಿನ ಮುದ್ರೆ ಸಹಿತ ನಿಜ ಕರದೊಳಿಹ ಪತ್ರಮಂ ಕೊಟ್ಟನಾತನ ಕೈಯೊಳು ||೪೯||

ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ
ದೀಸುವೊಕ್ಕಣೆಗಳ್ ಮಹಾಹಿತಂ ತನಗೀತ
ನೀ ಸೀಮೆಗರಸಾದಪಂ ಸರ್ವಥಾಮಿತ್ರನಪ್ಪವಂ ನಿಶ್ಚಯಮಿದು
ಮೋಸವೇ ಕುಲಾಚಾರಗತಿಯ ನಾರೈವೊಡೆ ವಿ
ಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನಿದ
ಕೋಸರಿಸಲೇತಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದನು ||೫೧||

ಗಣಿತಜಞರಂ ಕರೆಸಿ ನೋಡಿಸಿದನಾಗಳನು
ಗುಣಮಾದ ರಾಶಿಕೂಟವನಮಲ ಲಗ್ನಮಂ
ಗುಣಿಸಿ ವಿಸ್ತರಿಸಿದರ್ ಬಳಿಕ ಮದನಂ ಮಾಡಿಸಿದನೊಸಗೆಯಂ ಪೊಳಲೊಳು
ಅಣೆದುವಭ್ರವನೆಸೆವ ಗುಡಿ ತೋರಣಂಗಳಿಟ
ಟ್ಟಣಿಸಿದುವು ಬೇಕಾದ ಮಂಗಳ ಸುವಸ್ತುಗಳ್
ಮಣಿಮಯದ ವೇದಿಯಿಂ ವಿರಚಿಸಿದರೊಳ್ಪಿನಿಂ ವೈವಾಹ ಮಂಟಪವನು ||೫೩||

ಬಳಿಕ ಮದನ ಹೇಳಿಕೆಯೊಳಂದು ವಿದಿತ ಮಂ
ಗಳ ವಿವಾಹೋಚಿತ ಕ್ರಿಯೆಗಳಂ ವಿರಚಿಸಿದ
ರಿಳೆಯ ದಿವಿಜರ್ ಪುರಂಧ್ರಿಯರೈದೆ ಮಜ್ಜನದ ಮಂಡನದ ಮಾಳ್ಕೆಗಳನು
ಅಳವಡಿಸಿದರ್ ಪಣೆಯೊಳೆಸೆವ ಬಾಸಿಗದ ಮದ
ವಳಿಗನಾಗಿರ್ದಂ ಕುಳಿಂದಜಂ ದೇವಪುರ
ನಿಳಯ ಲಕ್ಷ್ಮೀಕಾಂತನೊಲವಿಂದೆ ವೆಷಮಮೃತಮಹುದು ಪೊಸತೇನೆನಲ್ಕೆ ||೫೪||

ಮೂವತ್ತೊಂದನೆಯ ಸಂಧಿ

ದುಷ್ಟಬುದ್ಧಿ ಮದನರನ್ನು ಬದುಕಿಸುವುದು

ಕೊಂದಪನನೊ ವಿಷವನೂಡಿಸಿ ಚಂದ್ರಹಾಸನಂ
ಮಂದಮತಿಯಾಗಿ ಮರೆದಿರ್ದಪನೊ ಮಗನೆಂಬ
ಸಂದೇಹದಿಂ ಚಂದನಾವತಿಯೊಳಿರದೆ ಕುಂತಳಪುರಕೆ ದುಷ್ಟಬುದ್ಧಿ
ನಿಂದಲ್ಲಿ ನಿಲ್ಲದೈತರೆ ಪಥದೊಳಿದಿರಾಗಿ
ಬಂದು ನುಡಿದುದು ಸರ್ಪಮೊಂದು ನಿನ್ನಾಲಯದೊ
ಳಿಂದುವರೆಗೊಡವೆಯಂ ಕಾದಿರ್ದೆನದು ನಿನ್ನ ಸುತನಿಂದೆ ಪೋದುದೆಂದು ||೨೮||

ಮಾನವರ ತೆರದೊಳಿಂತೆಂದೊರೆದು ಫಣಿ ಬಿಲಕೆ
ತಾನಿಳಿಯೆ ಕೇಳ್ದು ವಿಸ್ಮಿತನಾಗಿ ಮಂತ್ರಿ ದು
ಮ್ಮಾನದಿಂ ನಗರದ ಸಮೀಪಕೈತರೆ ವಾದ್ಯಘೋಷಿತಂ ಕಿವಿಯೊಳಿಡಿಯೆ
ಏನಿದುತ್ಸವಮೂರೊಳೆನೆ ಕಂಡವರ್ ನಿನ್ನ
ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿ
ಧಾನದಿಂ ಮದುವೆಯಂ ಮಾಡಿಸಿದನದರೊಸಗೆ ಪೊಳಲೊಳಾದಪುದೆಂದರು ||೨೯||

ರಂಜಿಸುವಪೊಸಮುತ್ತಿನೆಸೆವ ಬಾಸಿಗದ ನೊಸ  
ಲಿಂ ಜಡಿವ ಮಣಿಭೂಷಣಾವಳಿಯ ಕಾಂತಿಯಿಂ
ಮಂಜುಳ ಹರಿದ್ರ ಕುಂಕುಮ ಚರ್ಚಿತಾಂಗದಿಂ ಚೆಲ್ವಿಂದೆ ಸಂಗಡಿಸಿದ
ಅಂಜಲಿಗಳಿಂ ಮೆರೆವ ದಂಪತಿಗಳಭಿನಮಿಸೆ
ಮಂಜರಂ ಮರಿಗಿಳಿಗಳಂ ನಿರೀಕ್ಷಿಸುವಂತೆ
ನಂಜಿಡಿದ ಮನದಮಾತ್ಯಂ ನೋಡಿ ತನ್ನ ಸುತನಂ ಬಯ್ಯುತಿಂದೆಂದನು ||೩೨||

ಮೂಡನೀನೆಲವೊ ಮದನ ನಿನ್ನೆಡೆಗೆ ನಾಂ
ಗೂಢದಿಂ ಬರೆಸಿ ಕಳುಹಿದೊಡುರುವ ಕಜ್ಜಮಂ
ರೂಢಿಯಿಂ ಮಾಡಿ ಕೆಡಿಸಿದೆ ಪಾಪಿ ಹೃದಯ ಶೂಲನೆನಗೆ ಮೇದಿನಿಯೊಳು
ಗಾಢದಿಂ ಬಲಿದೆ ಸಾಮ್ರಾಜ್ಯಯ ಸಿಂಹಾಸನಾ
ರೂಢನಾಗಿರಲೊಲ್ಲದಿರ್ಜಿಸಿದ ವಿತ್ತಮಂ
ವೇಡೈಸಿದಖಿಳ ಜನಕಿತ್ತೆ ವನವಾಸವೇ ಗತಿ ನಿನಗೆ ಹೋಗೆಂದ ||೩೩||

ಪಿತನ ಮಾತಂ ಕೇಳ್ದು ಮದನನುರೆ ಬೆರಗಾಗಿ
ಖತಿಯೇಕೆ ಜೀಯ ನಿಮ್ಮಡಿಗಳ ನಿರೂಪಮಂ
ಪ್ರತಿಪಾಲಿಸಿದೆನಲ್ಲದಾನತಿಕ್ರಮಿಸಿ ಮಾಡಿದ ಕಜ್ಜಮೇನಿದರೊಳು
ಕ್ಷಿತಿಗೆ ಕೌತುಕವೆ ತಂದೆಯ ಮಾತಿಗಾಗಿ ರಘು
ಪತಿ ವರ್ತಿಸನೆವಿಪಿನ ವಾಸದೊಳ್ ಪತ್ರಸಂ
ಮತಿವಿಡಿದು ವಿಷಯೆಗೆ ವಿವಾಹಮಂ ವಿರಚಿಸಿದೊಡಾಯ್ತೆನಗೆ ವನಮೆಂದನು ||೩೪||

ಗನ್ನಗತಕದ ಮಾತು ಸಾಕೆನ್ನ ಕಣ್ಣಮುಂ
ದಿನ್ನಿರದೆ ಹೋಗೆಂದು ಮಂತ್ರಿ ಮಗನಂ ಬೈದು
ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿ ನೋಡಿಕೊಂಡದರೊಳಿರ್ದ
ಭಿನ್ನಿಸಿದ ಭಾವಾರ್ಥಮಂ ತಿಳಿದು ತಪ್ಪಿಲ್ಲ
ವೆನ್ನ ತನಯನೊಳಿನ್ನು ಲೋಕದೊಳ್ ವಿಧಿಲಿಖಿತ
ಮನ್ನಿವಾರಿಪರುಂಟೆ ಶಿವಾಶಿವಾ ಪೊಸತೆಂದು ಬಿಸುಸುಯ್ದು ಬೆರಗಾದನು||೩೫||

ವಿಷವ ಮೋಹಿಸುವಂತೆ ಕೊಡುವುದೆನಲೀತಂಗೆ
ವಿಷಯೆ ಮೋಹಿಸುವಂತೆ ಕೊಡುವುದೆಂಬೀ ಲೇಖ
ವಿಷಯವಿದು ವಿಧಿಕೃತವೋ ತನ್ನ ಮೋಸವೊ ಬರೆದವನ ಮರರೆಹೊ ಶಶಿಹಾಸನ
ಮೃಷೆಯೊ ಮದನನ ಮೇಲೆ ತಪ್ಪಿಲ್ಲ ಮೊದಲೆನಗೆ
ಋಷಿಗಳಾಡಿದ ಮಾತು ಪುಸಿಯದೆಂದಾ ಮಂತ್ರಿ
ವಿಷಮಬುದ್ಧಿಯೊಳೊಂದುಪಾಯಮಂ ಮನದೊಳಗೆ ನೆನೆದು ಚಿಂತಿಸುತಿರ್ದನು ||೩೬||

ವಿಧುಹಾಸನಂ ಪಲವುಪಾಯದಿಂದೀಗ ನಾಂ
ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ
ಳ್ವಧಿಕ ಸಂಪದಮಾಹಗದದರಿಂದೆ ಕುಲಘಾತಕಗೆ ಮದುವೆಯಾದ ವಿಷಯೆ
ವಿಧವೆಯಾಗಿರಲೆಂದು ಹೃದಯದೊಳ್ ನಿಶ್ಚೈಸಿ
ಮಧುರೋಕ್ತಿಯಿಂದೆ ಮದುಮಕ್ಕಳಂ ಮನ್ನಿಸಿ ವಿ
ವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದಿಂತೆಂದನು ||೩೭||

ವೀರ ಬಾರೈ ಚಂದ್ರಹಾಸ ನೀನಿನ್ನೆಗಂ
ದೂರಮಾಗಿರ್ದೆ ನಮಗಿನ್ನಳಿಯನಾದ ಬಳಿ
ಕೂರ ಹೊರ ಬನದೊಳಿಹ ಚಂಡಿಕಾಲಯಕೆ ಮದುವೆಯ ನಾಲ್ಕನೆಯ ದಿನದೊಳು
ನೀರಜಸಖಾಸ್ತ ಸಮಯದೊಳೊರ್ವನೇ ಪೋಗಿ
ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾ
ಚಾರಮಿದು ವರನಾದವಂಗೆ ನೀನಿಂದಿದಂ ಮಾಡೆಂದು ನೇಮಿಸಿದನು ||೩೮||

ಲೇಸಾದುದೆಂದು ಮಾವನ ಮಾತಿಗೊಪ್ಪಿ ಶಶಿ
ಹಾಸಂ ಪ್ರಸೂನ ಗಂಧಾಕ್ಷತೆಗಳಂ ತರಿಸ
ಲಾ ಸಚಿವನತಿ ಗೂಢದಿಂದೆ ಚಂಡಾಲರಂ ಕರೆಸಿ ನೀವಂದಿನಂತೆ
ಮೋಸದಿಂ ಬಿಟ್ಟು ಬಾರದೆ ಚಂಡಿಕಾಲಯಕೆ
ನೇಸರಂಬುಧಿಗಿಳಿಯಲರ್ಚನೆಗೆ ಬಹನೋರ್ವ
ನೋಸರಿಸದಡಗಿಕೊಂಡಿರ್ದಾತನಂ ಕೊಲ್ವುದೆಂದು ಬೆಸಸಿದನವರ್ಗೆ ||೩೯||

ಉತ್ತಮ ಹಯಾರೂಢನಾಗಿ ಮದನಂ ಜವದೊ
ಳಿತ್ತಣಿಂದೈದೆ ರವಿ ಪಶ್ಚಿಮಾಂಬುಧಿಗಿಳಿವ
ಪೊತ್ತು ಪೊಂದಳಿಗೆಯೊಳ್ ಪುಷ್ಪ ಫಲ ತಾಂಬೂಲ ಗಂಧಾಕ್ಷತೆಗಳನಿರಿಸಿ
ಎತ್ತಿಕೊಂಡತ್ತಣಿಂ ಬಹ ಚಂದ್ರಹಾಸನ ನಿ
ದೆತ್ತಪೋದಪೆಯೆಂದು ಬೆಸಗೊಳಲ್ ತವ ಪಿತಂ
ತೆತ್ತಸುವ್ರತಮೆನಲ್ ಚಂಡಿಕಾ  ಪೂಜೆಯಂ ಮಾಡಿ ಬಂದಪೆನೆಂದನು ||೪೩||

ತಟ್ಟನೆ ತುರಂಗಮವನಿಳಿದಿಳೆಗೆ ಮತ್ಪಿತನ
ಕಟ್ಟಳೆಯ ಚಂಡಿಕಾ ಪೂಜೆಗಾಂ ಪೋದಪೆಂ
ನೆಟ್ಟನೆ ಮಹೀಶ್ವರನಂ ಪಿರಿದು ಕಜ್ಜಕೆ ನಿನ್ನೊಡಗೊಂಡು ಬಾಯೆನಲ್ಕೆ
ಕಟ್ಟವಸರಕ್ಕೆ ಬಂದನೆಂದರ್ಚನಾ ದ್ರವ್ಯ
ಮಿಟ್ಟ ಪೊಂದಳಿಗೆಯಂ ತೆಗೆದುಕೊಂಡಶ್ವಮಂ
ಕೊಟ್ಟಾತನಂ ಕಳುಹಿ ಪೊರಮಟ್ಟನೇಕಾಕಿಯಾಗಿ ಮದನಂ ಪೊಳಲನು ||೪೪||

ತನ್ನ ಪಿತನಾಜ್ಞೆಯಂ ನಡೆಸುವ ಕುಲವ್ರತದ
ನನ್ನಿ ಶಶಿಹಾಸಂಗೆ ಭಂಗಮಾದಪುದೆಂದು
ಮನ್ನಿಸಿ ನೆರೆದ ಸಕಲ ಸೇವಕರನೆಲ್ಲರಂ ಕಳುಹಿ ತಾನೊರ್ವನಾಗಿ
ಉನ್ನತ ದ್ರುಮಷಂಡ ಮಂಡಿತದ ಬನದೊಳ್ ಪ್ರ
ಸನ್ನೆಯಾಗಿಹ ಚಂಡಿಕಾಲಯಕೆ ಬರುತಿರ್ದ
ನನ್ನೆಗಂ ಕರತಳದ ಗಂಧಪುಷ್ಪದ ಪಾತ್ರೆಯೋಸರಿಸಿ ಬಿದ್ದುದಿಳೆಗೆ ||೪೫||

ಖಳರಂತರಂಗ ಪ್ರವೇಶದ ವಿವೇಕಮಂ
ಬಳಸಿದರಿಷಡ್ವರ್ಗಮೊತ್ತ ರಿಸಿ ಮುರಿವಂತೆ
ಪೊಲಬನರಿಯದೊಳಪುಗುವಮದನನಂ ಮಂತ್ರಿ ಕಳುಹಿದೊಡಲ್ಲಿ ಬಂದಡಗಿದ
ಕೊಲೆಗಡಿಗ ಚಂಡಾಲರುಗಿದ ಕೈದುಗಳಿಂದೆ
ಕೆಲಬಲದೊಳಿರ್ದು ಪೊಯ್ದಿರಿದು ಕೆಡಹಿದೊಡೆ ಭೂ
ತಳಕೆ ಬೀಳುತ್ತವಂ ಮಾಧವ ಸ್ಮರಣೆಯಿಂದಸುದೊರೆದನಾಕ್ಷಣದೊಳು ||೪೭||

ಅವಗಡಿಸಿ ಮದನನಂ ಘಾತುಕರ್ ಚಂಡಿಕಾ
ಭವನದೊಳ್ ಕೊಂದು ನಿಲ್ಲದೆ ಪೋದರಿತ್ತಲು
ತ್ಸವದಿಂದೆ ಚಂದ್ರಹಾಸಂ ಕುಂತಳೇಂದ್ರನಂ ಕಾಣಲಾ ನೃಪನವಂಗೆ
ಅವನಿಯಂ ಕೊಟ್ಟರಸುಪಟ್ಟವಂ ಕಟ್ಟಿ ಗಾ
ಲವನ ಮತದಿಂದೆ ಗಾಂಧರ್ವ  ವೈವಾಹದಿಂ
ಕುವರಿ ಚಂಪಕಮಾಲಿನಿಯನಿತ್ತು ಸತ್ಕರಿಸಿ ಬನಕೆ ತಾಂ ಪೊರಮಟ್ಟನು ||೪೮||

ಗಾಲವನ ಮತದೊಳೆನ್ನ ಕರೆಸದಿಂದುಭೂ
ಪಾಲಂ ಕುಳಿಂದತನಯಂಗಿಳೆಯನೊಪ್ಪಿಸಿ .ತ್ಮಸ್ತುತಿಯ ಪರನಿಂದೆಯವನ
ನಾಲಯಕೆ ತೆರಳಿದನೆ ಮದನನಿದ್ದೆಗೈದನೆಂದು ಪಲ್ಮೊರೆದು ಮಗನ
ಮೇಲೆ ಕೋಪಿಸುತಿರ್ದನನ್ನೆಗಂ ಭ್ರಮರಾರಿ
ಮಾಲಿನಿವೆರಸಿ ಮಾವನಂ ಕಾಣಲೆಂದು ಶುಂ
ಡಾಲ ಮಸ್ತಕದಿಂದಮಿಳಿಯಂದ ಶಶಿಹಾಸನೆರಗಿದಂ ಸಚಿವನಡಿಗೆ ||೫೧||

ಕಳಿವರಿವ ಕೋಪದಿಂ ಮಂತ್ರಿ ವಂಶಾಚಾರ
ಮುಳಿಯಲಾಗದು ಚಂಡಿಕಾರ್ಚನೆಗೆ ನಡೆಯೆಂದು
ಕಳುಹಿದೊಡೆ ನೀಂ ಮಾಡಿದುಜ್ಜುಗಮಿದೇನೆಂದು ಕೇಳ್ದೊಡಾ ಶಶಿಹಾಸನು
ಅಳವಡಿಸಿಕೊಂಡು ನಾಂ ಪೋಗುತಿರೆ ನಡುವೆ ಕುಂ
ತಳ ರಾಜನರಮನೆಗೆ ತನಗವಸರವನಿತ್ತು
ತಳರ್ದನೊರ್ವನೆ ನಿನ್ನಮಗನಂಬಿಕಾ ಪೂಜೆಗಿಂತಾಯ್ತು ಬಳಿಕೆಂದನು ||೫೨||

ಹಮ್ಮೈಸಿದಂ ದುಷ್ಟಬುದ್ಧಿ ನಯನದೊಳಗಳಿಯ
ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಹಿಂಸೆ
ಯಮ್ಮಾಡಿ ಮಾನವಂ ಬಾಳ್ದಪನೆ ದೀಪಮಂಕೆಡಿಸುವ ಪತಂಗದಂತೆ
ನಮ್ಮುಪಾಯವೆ ನಮಗಪಾಯಮಂ ತಂದುದೆಂ
ದೊಮ್ಮೆ ನಿಜ ಸದನಮಂ ಪೊಕ್ಕಾರುಮರಿಯದವೊ
ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದು ಕೋಟೆಯಂ ಕತ್ತಲೆಯೊಳು ||೫೩||

ಪಾಕಶಾಸನ ತನಯ ಕೇಳ್ ಬಳಿಕ ಮಂತ್ರಿ ಸುತ
ಶೋಕದಿಂದಲ್ಲಿಹ ಮರುಳ್ಗಳಂ ಕಾಣದವಿ
ವೇಕದಿಂ ಬೇವ ಕುಣಪದ ಚಿತೆಯೊಳುರಿವ ಕಾಷ್ಟಂಗಳಂ ತೆಗೆದುಕೊಂಡು
ಆ ಕಾಳಿಕಾಲಯಕೆ ಬಂದದರ ಬೆಳಕಿನೊಳ್
ವ್ಯಾಕೀರ್ಣ ಕೇಶದ ನಿಮಿರ್ದ ಕೈಕಾಲುಗಳ
ನೇಕಾಯುಧದ ಗಾಯದೊಡಲ ರುಧಿರದ ಪೊನಲ ಸುಕುಮಾರನಂ ಕಂಡನು ||೫೭||

ಕಯ್ಯೊಳಿಹ ಕಾಷ್ಟಂಗಳಂ ಬಿಸುಟು ತನುಭವನ
ಮೆಯ್ಯ ಗಾಯಂಗಳಂ ತಡಹಿ ತಕ್ಕೈಸಿ ಮಗು
ಳೊಯ್ಯನೊಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚುಂಬಿಸಿ ಕುಮಾರ ನಿನ್ನ
ಅಯ್ಯನಾಂ ಬಂದೆನೇಳೈ ತಂದೆ ನಾಡ ನಾ
ರಯ್ಯಬೇಡವೆ ಕಂದ ಕುಂತಳಾಧೀಶನೇ
ಗೆಯ್ಯ ಹೇಳಿದೆನೆನಗೆ ವಿವರಿಸದೆ ಸುಮ್ಮನಿರ್ದಪೆಯೆಂದೊರಲ್ದನು ||೫೯||

ಕಂಬನಿಗಳರುಣಾಂಬುವಂ ತೊಳೆಯೆ ಮುಂಡಾಡಿ
ಪಂಬಲಿಸಿ ಹಲುಬಿದಂ ಮರುಗಿ ತನ್ನಿಂದದಳಿದ
ನೆಂಬಳಲ್ಮಿಗೆ ಮಂತ್ರಿ ಸೈರಿಸದೆ ಕೆಲಬಲದ ಕಂಬಂಗಳಂ ಪಾಯಲು
ಕುಂಬಳದ ಕಾಯಂತೆ ಚಿಪ್ಪಾಗಿ ನಿಜಮಸ್ತ
ಕಂ ಬಿರಿದು ಬಿದ್ದನುರ್ವಿಗೆ ಪೋದುದಸುಕಾಯ
ದಿಂ ಬಳಿಕ ನಂದಿದ  ಸೊಡರ್ಗಳೆನೆ ಮೃತರಾಗಿ ಸುತತಾತರಿರುತಿರ್ದರು ||೬೨||
ಚಂಡಿಕಾಲಯಕಖಿಳ ಜನ ಸಹಿತ ನಡೆತಂದು
ದಿಂಡುಗೆಡೆದಿಹ ಮಾವ ಮೈದುನರ ಹಾನಿಯಂ
ಕಂಡು ಕಡುಶೋಕದಿಂದುರೆ ನೊಂದು ಚಂದ್ರಹಾಸಂ ದೇವಿಯಂ ನೋಡುತೆ
ಖಂಡಿಸಿದೆಲೌ ತನ್ನ ಭಾಗ್ಯಮಂ ತಪ್ಪಾವು
ದಂಡಲೆದು ಪಡೆವೆನಿವರಸುಗಳಂ ಮೀರಿದೊಡೆ
ಪುಂಡರೀಕಾಂಬಕನ ಸಾಯುಜ್ಯ ಮೆನಗಾಗಲೆಂದು ನಿಶ್ಚಿತನಾದನು|| ೬೫||

ಬೆಚ್ಚಿದಂತೆಸೆವ ಪೀಠವನಿಳಿದು ರುದ್ರಾಣಿ
ಚೆಚ್ಚರದೊಳೈತಂದು ಕೈಯ ಬಾಳಂ ಪಿಡಿದು
ನಿಚ್ಚಟದ ಹರಿಭಕ್ತಿಗಾಂ ಪ್ರೀತಿಯಂ ತಳೆದನಾತ್ಮವಧೆ ಬೇಡ ನಿನಗೆ
ಪೆಚ್ಚಿದ ಕುಮಂತ್ರ ಪಾಪದೊಳಳಿದನೀ ಮಂತ್ರಿ
ವೆಚ್ಚಿಸಿದನಸುವನಾತನ ಸುತಂ ನಿನಗಾಗಿ
ಮೆಚ್ಚಿಸಿದೆ ನೀಂ ಮಗನೆ ಬಯಕೆಯಂ ಪೇಳೆರಡು ವರವನಿತ್ತಪೆನೆಂದಳು||೬೮||

ದೇವಿಯ ಪದಾಂಬುಜದೊಳೆರಗಿ ಕೈಮುಗಿದು ನಿಂ
ದಾವಾವ ಜನ್ಮ ಜನ್ಠಮಾಂತರದೊಳೆನಗೆ ರಾ
ಜೀವನಾಭನ ಭಕ್ತಿ ದೊರೆಕೊಳಲಿದೊಂದು ಮಡಿದಿಹ ಮಂತ್ರಿ ಮಂತ್ರಿಸುತರು
ಜೀವಿಸಲಿದೊಂದೀಗಗಳಿಂತೆರಡು ವರಮಂ ಕೃ
ಪಾವಲೋಕನದೊಳಿತ್ತಪುದೆಂದು ಮತ್ತ ಚರ
ಣಾವನತನಾಗಲ್ಕೆ ಪಿಡಿದೆತ್ತಿ ಕ್ಷತಮಡಗೆ ಮೈದೊಡವುತಿಂತೆಂದಳು ||೬೯||

ಮೊಳಗಿದುವು ದೇವದುಂದುಭಿಗಳಂತಾಗ ಪೂ
ಮಳೆಕರೆದುದಭ್ರದೊಳ್ ಕೊಂಡಾಡಿತಮರತತಿ
ಬಳಿಕ ಶಾಂಭವಿ ಮಾಯವಾದಳಸುಪಸರಿಸಿತು ಮದನ ಮಂತ್ರಿಗಳೊಡಲೊಳು
ಬಲ ರೂಪ ಕಾಂತಿಗಳ್ ಮುನ್ನಿನನಂದದೊಳೆಸೆಯೆ
ಮಲಗಿದವರೇಳ್ಶಂತೆ ಕಣ್ದೆರೆದು ಕುಳ್ಳಿರ್ದ
ರೊಲವಿನಿಂ ಚಂದ್ರಹಾಸಂ ಮಾವನಡಿಗೆ ಮಣಿದಪ್ಪಿದಂ ಮೈದುನನನು ||೭೪||

ಭೂವಲಯಕಿದು ಪೊಸತು ಮರಣಮಾದೊಡೆ ಮತ್ತೆ
ಜೀವಮಂ ಬರಿಸಿದವರುಂಟೆ ನಿನ್ನವೊಲೆಂದು
ಕೈವಾರಿಸುವ ನಿಖಿಳಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು
ಕಾವರಾರ್ ಕೊಲ್ವರಾರಳಿವರಾರುಳಿವರಾರ್
ಭಾವಿಪೊಡೆ ವಿಷ್ಣು ಮಾಯಾಮಯಮಿದೆಂದರಿದು
ನೀವೆಲ್ಲರುಂ ಕೃಷ್ಣ ಭಜನೆಗೈದಪುದೆಂದು ಸಾರಿದಂ ಬೇಡಿಕೊಳುತೆ ||೭೫||

ನೆನಕೆ

ದೇವುಡು ನರಸಿಂಹಶಾಸ್ತ್ರೀ. ಎಂ.  ಎ


ಬಿ. ಶಿವಮೂರ್ತಿಶಾಸ್ತ್ರೀ.

1 ಕಾಮೆಂಟ್‌: